ಹೊನ್ನಾವರ .ನಮ್ಮ ನಾಡಿನ ಸಂಸ್ಕøತಿ ಕಲೆ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಓಂದು ಅಪರೂಪವಾದ ವೇದಿಕೆ ಯುವಜನ ಮೇಳ ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ ಇಂತಹ ಯುವಜನ ಮೇಳಗಳು ಈ ಎಲ್ಲಾ ಮೌಲ್ಯಗಳನ್ನು ಹೊರತರಲು ಸಹಕಾರಿಯಾಗಿರುತ್ತದೆ ಎಂದು ಜಿ.ಪಂ ಅದ್ಯಕ್ಷರಾದ ಜಯಶ್ರೀ ಮೋಗೆರ ನುಡಿದರು. ಅವರು ಬಳಕೂರಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ À ಜಿ.ಪಂ ಸದಸ್ಯÀ ಪುಷ್ಪಾ ನಾಯ್ಕಮಾತನಾಡಿ ನಾವಿಲ್ಲಿ ಅತಿ ಕಡಿಮೆ ವೇಳೆಯಲ್ಲಿ ಯುವಜನ ಮೇಳವನ್ನು ಸಂಘಟಿಸಿದ್ದೇವೆ. ಪ್ರÀಥಮ ಬಾರಿ ನೇರವಾಗಿ ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸಲು ನಮಗೆ ಅವಕಾಶ ದೊರಕಿರುವುದು ಒಂದು ಸುಯೋಗ ನಿಮ್ಮೆಲ್ಲ ಸ್ಪರ್ಧಾಳುಗಳ ಯಶಸ್ಸು ಯುವಜನ ಮೇಳದ ಯಶಸ್ವಿನಲ್ಲಿ ಅಡಗಿದೆ ಎಂದು ನುಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ತಾ.ಪಂ ಉಪಾಧ್ಯಕ್ಷ ಲಲಿತಾ ಈಶ್ವರ ನಾಯ್ಕ ಶುಭಕೋರಿದರು
ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕ ಯುವ ಒಕ್ಕೂಟದ ಅಧ್ಯಕ್ಷÀ ವಿನಾಯಕ ನಾಯ್ಕ ಮೂಡ್ಕಣಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಯುವಜನ ಮೇಳ ಸಂಘಟಿಸಲು ಅವಕಾಶ ದೊರಕಿರುವುದು ನಮ್ಮ ಸುದೈವ ಕಾರ್ಯಕ್ರಮ ಯಶಸ್ವಿಯಾಗಿ ಸಾಗಲು ಎಲ್ಲಾ ಸ್ಪರ್ಧಾಳುಗಳ ಕ್ರೀಯಾಶೀಲ ಭಾಗವಹಿಸುವಿಕೆ ಮುಖ್ಯ ಪ್ರಥಮ ಬಾರಿಗೆ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು. ವೇದಿಕೆಯಲ್ಲಿ ಖ್ಯಾತ ಹೃದ್ರೋಗ ತಜ್ಞರಾದ ಡಾ|| ಆಶಿಕ್ À ಹೆಗಡೆ ಹಾಗೂ ಯುವ ಪ್ರತಿಭೆ ಗಣೇಶ ಹೆಗಡೆ ಇವರನ್ನು ಸನ್ಮಾನಿಸಲಾಯಿತು.
ಸಭಾ ವೇದಿಕೆಯಲ್ಲಿ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೆಶಕಿ ಜಿ.ಗಾಯತ್ರಿ, ಜಿಲ್ಲಾ ತರಭೇತುದಾರರಾದ ಪ್ರಕಾಶ ರೇವಣಕರ್, ಇಡಗುಂಜಿ ಗ್ರಾ.ಪಂ ಅಧ್ಯಕ್ಷೆ ಬೇಬಿ ನಾಯ್ಕ, ಕೋಡಾಣಿ ಗ್ರಾ.ಪಂ ಅಧ್ಯಕ್ಷರಾದ ರಾಜೇಶ ನಾಯ್ಕ, ಮಹಾಸತಿ ಸ್ಪೋಟ್ರ್ಸ ಅಶೋಸಿಯೇಸನ್ ಅಧ್ಯಕ್ಷ ಬಾಬು ನಾಯ್ಕ ಹಾಗೂ ವಿವಿದ ತಾಲೂಕಿನ ಯುವ ಒಕ್ಕೂಟದ ಅಧ್ಯಕ್ಷರು ಇದ್ದರು
್ಲ ತಾಲೂಕ ಯುವಜನ ಸೇವಾ ಕ್ರೀಡಧೀಕಾರಿ ಸುಧೀಶ ನಾಯ್ಕ ಸ್ವಾಗತಿಸಿದರು. ಪ್ರಶಾಂತ ಹೆಗಡೆ ಮೂಡಲ ಮನೆ ಕಾರ್ಯಕ್ರಮ ನಿರೂಪಿಸಿದರು.
Leave a Comment