ಹೊನ್ನಾವರ:
ಹೊನ್ನಾವರ ಪಿಎಲ್ಡಿ ಬ್ಯಾಂಕು ಅನೇಕ ಶಾಖೆಗಳು ತೆರೆಯಲು ಹಲವಾರು ನಿರ್ದೇಶಕರ ಶ್ರಮದಿಂದಾಗಿ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸುವರ್ಣ ಮಹೋತ್ಸವ ಉದ್ಘಾಟಿಸಿದ ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.ಹೊನ್ನಾವರ: ಹೊನ್ನಾವರ ಪಿಎಲ್ಡಿ ಬ್ಯಾಂಕು ಅನೇಕ ಶಾಖೆಗಳು ತೆರೆಯಲು ಹಲವಾರು ನಿರ್ದೇಶಕರ ಶ್ರಮದಿಂದಾಗಿ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸುವರ್ಣ ಮಹೋತ್ಸವ ಉದ್ಘಾಟಿಸಿದ ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ನಡೆದ ಹೊನ್ನಾವರ ಪಿ.ಎಲ್.ಡಿ ಬ್ಯಾಂಕಿನ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕು ಕೃಷಿಸಾಲ ಹಾಗೂ ಕೃಷಿಯೇತರ ಸಾಲ ನೀಡಿದ್ದು ವಸೂಲಾತಿಯನ್ನು ಉತ್ತಮ ಪ್ರಗತಿಯನ್ನು ಕಂಡಿದೆ. ಜಿಲ್ಲೆಯ 11 ಭೂ ಬ್ಯಾಂಕುಗಳಲ್ಲಿ ಹೊನ್ನಾವರ ಬ್ಯಾಂಕ ಉತ್ತಮ ಸಾಧನೆ ಮಾಡಿದೆ. ಠೇವಣಿ ಸಂಗ್ರಹಿಸಿ ರೈತರಿಗೆ ಬೇಕಾದ ವಿಶೇಷ ಸಾಲ. ಸೌಲಭ್ಯ ನೀಡುತ್ತಿದ್ದು ರಾಜ್ಯದಲ್ಲಿ ಗುರುತಿಸಲ್ಪಟ್ಟಿದ್ದು ಹೆಮ್ಮೆಯ ಸಂಗತಿ ಎಂದರು. ಶಾಸಕ ಮಂಕಾಳ ವೈದ್ಯ ಹೊನ್ನಾವರ ಪಿ.ಎಲ್.ಡಿ ಬ್ಯಾಂಕಿನ ಮಂಕಿಯ ನೂತನ ಶಾಖೆಯ ಉದ್ಘಾಟಿಸಿ ಮಾತನಾಡಿ, ಕಳೆದ 50 ವರ್ಷಗಳ ಹಿಂದೆ ನಮ್ಮ ಹಿರಿಯರು ಬ್ಯಾಂಕು ಸ್ಥಾಪಿಸಿರುವುದರಿಂದ ಇಂದು ಅನೇಕ ರೈತರಿಗೆ ಸಹಕಾರಿಯಾಗಿದೆ. ಬ್ಯಾಂಕು ಸುಮಾರು 30 ಜನರಿಗೆ ಉದ್ಯೋಗ ಅವಕಾಶ ನೀಡಿದೆ. ಬ್ಯಾಂಕಿನ ಶಾಖೆಗಳು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಲಾಗಿದೆ. ಇದರಿಂದ ಅನೇಕ ಗ್ರಾಹಕರಿಗೆ ಉಪಯುಕ್ತವಾಗಿದೆ. ಕೃಷಿ ಸಾಲ ಮತ್ತು ಕೃಷಿಯೇತರ ಸಾಲಗಳನ್ನು ನೀಡಿ ಅಭಿವೃದ್ಧಿ ಪಥದಲ್ಲಿದೆ’ ಎಂದರು. `ಸುವರ್ಣ ಪ್ರಭ’ ಸ್ಮರಣ ಸಂಚಿಕೆ ರಕ್ಷಾಪುಟ ಅನಾವರಣ ಮಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಸಹಕಾರಿ ಮುಖಾಂತರ ಕಾರ್ಯರೂಪಕ್ಕೆ ತರಬೇಕು. ರೈತರಿಗೆ ಎಲ್ಲ ಸೌಲಭ್ಯಗಳು ಸಹಕಾರಿ ಬ್ಯಾಂಕ ಮುಖಾಂತರ ಸಿಗಬೇಕು ಎಂದರು. ಬ್ಯಾಂಕಿನ ಪ್ರಥಮ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿದ್ದ ಸಂಸ್ಥೆಗೆ ಕಟ್ಟಡ ಕಟ್ಟಿಸಿದ ನ್ಯಾಯವಾದಿ ಸುಲೇಮಾನ್ ತಲ್ಕಣಿ, ಮಾಜಿ ಅಧ್ಯಕ್ಷರುಗಳಾದ ಡಾ. ಎಂ.ಪಿ. ಕರ್ಕಿ, ಡಾ. ಜಿ.ಜಿ.ಸಭಾಹಿತ, ಸಾಂಬ ಹೆಗಡೆ, ಪಿ.ಎಸ್.ಭಟ್ಟ ಉಪ್ಪೋಣಿ, ಚಂದ್ರಶೇಖರ ಗೌಡ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೆಶಕರು, ನಿವೃತ್ತ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಯೋಗೇಶ ರಾಯ್ಕರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಹಕಾರಿ ಧುರೀಣ ಆರ್.ಎಸ್.ಭಾಗವತ, ಪಟ್ಟಣ ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ, ಉಲ್ಲಾಸ ನಾಯ್ಕ, ಶಿವರಾಮ ಸಂಗುಮನೆ, ಈರಮ್ಮ ನಾಯ್ಕ, ಗಣಪಯ್ಯ ಗೌಡ, ವೆಂಕಟ್ರಮಣ ಭಟ್ಟ, ಪಿ.ಟಿ.ನಾಯ್ಕ, ಮಂಗಲಾ ಎಸ್. ಭಟ್ಟ, ಟಿ.ಎಸ್.ಹೆಗಡೆ, ಎಂ.ಆರ್.ಹೆಗಡೆ, ಸತೀಶ ತಾಂಡೇಲ, ಇತರರು ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷ ರಾಮಪ್ಪ ನಾಯ್ಕ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಪಿ.ಎನ್.ಭಟ್ ವರದಿ ವಾಚಿಸಿದರು. ಸಹಕಾರದ ಕುರಿತು ಜಯರಾಮ ಉಪನ್ಯಾಸ ನಡೆಯಿತು. ನಂತರ ಯಕ್ಷಗಾನ ನಡೆಯಿತು.
Leave a Comment