ಹೊನ್ನಾವರ . ಕರ್ನಾಟಕ ರಾಜಕೀಯ ವ್ಯವಸ್ದೆಗೆ ಹೊಸ ತಿರುವು ಸಂಭವಿಸುವ ಸಾಧ್ಯತೆ ದಟ್ಟವಾಗಿದ್ದು ಆ ನಿಟ್ಟಿನಲ್ಲಿ ರಾಷ್ಟೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಹೊಸ ಪಕ್ಷವೊಂದು 224 ಕ್ಷೇತ್ರದಲ್ಲಿ ಸಂಚರಿಸಿ ಅಭ್ಯರ್ಥಿಯ ಕಣಕಿಳ್ಳಿಸುವ ಸಿದ್ದತೆಯಲ್ಲಿ ತೊಡಗಿದೆ.
ಹೊನ್ನಾವರದಲ್ಲಿ ನಡೆದ ಮಾದ್ಯಮಗೊಷ್ಟಿಯಲ್ಲಿ ಎಂ.ಇ.ಪಿ ಪಕ್ಷದ ರಾಜ್ಯ ಸಂಚಾಲಕರಾದ ಸಿ.ಎಂ. ಶಹಾಬಾಜ್ ಖಾನ್ ಮಾತನಾಡಿ ಕರ್ನಾಟಕ ರಾಜ್ಯ ಐತಿಹಾಸಿಕ ಪ್ರಸಿದ್ದತೆಯನ್ನು ಪಡೆದಿದೆ. ಹಲವು ಸಾದನೆಯನ್ನು ಸಾಧಿಸಿದೆ ಅದರಲ್ಲೂ ವಿಶೇಷವಾಗಿ ಉತ್ತರಕನ್ನಡ ಕರಾವಳಿ ಪ್ರದೇಶ ಪ್ರಸಿದ್ದತೆಯಿಂದ ಕೂಡಿದೆ. ಇಂತಹ ಪ್ರದೇಶದಲ್ಲಿ ಹಲವು ಪಕ್ಷಗಳು ತಮ್ಮ ಅಭ್ಯರ್ಥಿಯ ಕಣಕ್ಕಿಳಿಸಿದೆ. ಆದರೆ ನಮ್ಮ ಎಂ.ಇ.ಪಿ ಪಕ್ಷ ಈ ಬಾರಿ ಕರ್ನಾಟಕ ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಲಿದ್ದು 150 ಸ್ದಾನದಲ್ಲಿ ಗೆಲವು ಸಾದಿಸುವ ವಿಶ್ವಾಸವಿದೆ.
ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಯಾವುದೇ ಪಕ್ಷದಲ್ಲಿಯೂ ನೀಡುತ್ತಿಲ್ಲ. ನಮ್ಮ ಪಕ್ಷವು 70% ಮಹಿಳೆಯರನ್ನು ಕಣಕ್ಕಿಳಿಸಿ ಸಮಾನತೆ ಹಾಗೂ ಜಾತ್ಯಾತೀತ ಪಕ್ಷವಾಗಿದೆ. ಕರ್ನಾಟಕ ಆಡಳಿತದ ಮೂಖ್ಯಮಂತ್ರಿ ಯಾಗಿ ಇದುವರೆಗೂ ಮಹಿಳೆಯಾಗಲೂ ರಾಜಕೀಯ ಪಕ್ಷಗಳು ಅವಕಾಶ ನೀಡಲಿಲ್ಲ. ಮುಂದೆಯೂ ಅವಕಾಶ ನೀಡುವಂತೆ ಕಾಣುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿಬಾರಿಯೂ ಮೂಖ್ಯಮಂತ್ರಿ ಅಥವಾ ಉಪಮೂಖ್ಯಮಂತ್ರಿ ಮಹಿಳೆಯಾಗಲಿದ್ದಾಳೆ. ಸಚ್ ಕಾ ಸಾತ್ ಸಬ್ ಕಾ ವಿಕಾಸ್ ಎಂವ ವಾಕ್ಯದ ಮೇರೆಗೆ ಮಾನವತೆಗೆ ನ್ಯಾಯ ಎಂಬುದು ನಮ್ಮ ಪಕ್ಷದ ಪ್ರಮುಖ ನಿಲುವು. ವಜ್ರ ಪಕ್ಷದ ಚಿಹ್ನೆಯಾಗಿದೆ. ಮಹಿಳಾಸಮಾನತೆ ಹಾಗೂ ಗಾಂಧಿಜಿಯವರ ಕನಸನ್ನು ನನಸಾಗಿಸುವುದು ನಮ್ಮ ಗುರಿಯಾಗಿದೆ. ಉಚಿತ ಶಿಕ್ಷಣ ಆರೊಗ್ಯ ಕಲ್ಪಿಸುತ್ತೆವೆ ಮುಂದಿನ ದಿನದಲ್ಲಿ ನಡೆಯುವ ಚುನಾವಣೆಯಲ್ಲಿ ರಾಜ್ಯದ ಮತದಾರರು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ನಮ್ಮ ರಾಷ್ಟ ಅಧ್ಯಕ್ಷರಾದ ಡಾ. ನೌಹ್ವೀರಾ ಷೇಕ್ ಅವರ ಮಾರ್ಗದರ್ಶನ ಮೇರೆಗೆ ಸರ್ಕಾರ ನಡೆಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಸ್ಯೆಯದ್ ಸಲ್ಮಾನ್ , ಸತೀಶ ಮುಂತಾದವರು ಉಪಸ್ದಿತರಿದ್ದರು.
Leave a Comment