ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, ಸಂಘಟನೆಯ ಮುಂಬೈನ ಸಮೀರ ಸಿಂಗ್ ಎಂಬುವವರು ನಮ್ಮ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಇಡೀ ದೇಶವನ್ನು ಓಟದ ಮೂಲಕ ಕ್ರಮಿಸಲು ಮುಂದಾಗಿದ್ದಾರೆ. ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, ಸಂಘಟನೆಯ ಮುಂಬೈನ ಸಮೀರ ಸಿಂಗ್ ಎಂಬುವವರು ನಮ್ಮ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಇಡೀ ದೇಶವನ್ನು ಓಟದ ಮೂಲಕ ಕ್ರಮಿಸಲು ಮುಂದಾಗಿದ್ದಾರೆ.
ಅವರು ದಿನಾಂಕ 03-02-2018 ರ ಶನಿವಾರ ರಾತ್ರಿ ಕಾರವಾರದಿಂದ ಹೊನ್ನಾವರಕ್ಕೆ ಬಂದಾಗ ಅವರನ್ನು ಹೊನ್ನಾವರ ಲಾಯನ್ಸ್ ಕ್ಲಬ್ ವತಿಯಿಂದ ಸ್ವಾಗತ ಕೋರಿ ಅವರ ಮುಂದಿನ ಪ್ರಯಾಣ ಯಶಸ್ವಿಯಾಗಲಿ ಎಂದು ಹಾರೈಸಿ ಅಭಿನಂದಿಸಲಾಯಿತು.
ಭಾರತ-ಪಾಕಿಸ್ತಾನ ಗಡಿ ವಾಘಾದಿಂದ ಡಿಸೆಂಬರ 1 ರಂದು ತಮ್ಮ ಪ್ರಯಾಣ ಆರಂಭಿಸಿದ ಅವರು ದೆಹಲಿ ಮೂಲಕ ಸಾಗಿ ದೇಶದ ಪಶ್ಚಿಮ ಗಡಿಯಲ್ಲಿ ಪ್ರಯಾಣ ಬೆಳೆಸಿರುವದಾಗಿ ಸುಮಾರು 15 ಸಾವಿರ ದೂರ ಕ್ರಮಿಸುವ ಗುರಿಯನ್ನು ಹೊಂದಿದ್ದು ಗೋವಾ-ಕಾರವಾರ ಮಂಗಳೂರು ಮೂಲಕ ಕೇರಳ, ಕನ್ಯಾಕುಮಾರಿ-ಚೆನೈ-ಕೊಲ್ಕೊತ್ತಾ ಮೂಲಕ ಈಶಾನ್ಯ ರಾಜ್ಯದಲ್ಲಿ ಸಂಚರಿಸಿ ಪುನಃ ವಾಘಾ ತಲುಪುವದಾಗಿ ತಮ್ಮ ತಂಡದಲ್ಲಿ ಒಟ್ಟೂ 10 ಸದಸ್ಯರಿದ್ದಾರೆ. ದಿನಕ್ಕೆ 100 ಕಿ.ಮೀ. ಗುರಿ ಎಂದು ತಮ್ಮ ಪ್ರಯಾಣದ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಲಾ.ದೇವಿದಾಸ ಮಡಿವಾಳ, ರಿಜನ್ ಚೆಯರ್ ಪರ್ಸನ್ ಲಾ.ಬಿ.ವಿ.ಬಿಂದಗಿ, ಲಾ.ಜೀವೊತ್ತಮ ನಾಯಕ, ಲಾ.ಮಂಜು ಆಚಾರ್ಯ ಇದ್ದರು.
Leave a Comment