ಹೊನ್ನಾವರ:
ತಾಲೂಕಿನ ಕಡತೋಕದಲ್ಲಿ ಮಟಕಾ ಜೂಜಿನಲ್ಲಿ ತೊಡಗಿದ್ದವರ ಮೇಲೆ ಹೊನ್ನಾವರ ಪೊಲೀಸರು ದಾಳಿ ನಡೆಸಿ ಮಟಕಾ ದಂಧೆಗೆ ಬಳಸಿದ ಹಣ ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮಟಕಾ ದಂಧೆಯಲ್ಲಿ ತೊಡಗಿದ್ದ ಬುಕ್ಕಿ ಭಟ್ಕಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭಾತನಗರದ ಕೃಷ್ಣ ಮಂಜು ಗೌಡ ಪರಾರಿಯಾಗಿದ್ದಾನೆ. ಮಟಕಾ ದಂಧೆ ನಡೆಸುತ್ತಿರುವ ಈತನ ಮೇಲೆ ಹಲವಾರು ಬಾರಿ ಪ್ರಕರಣ ದಾಖಲಾಗಿತ್ತು. ಸ್ಥಳದಲ್ಲಿ ಸಿಕ್ಕಿ ಬಿದ್ದ ಕಡತೋಕಾದ ಸುರೇಶ ನರಸಿಂಹ ಭಟ್ ಬಂಧಿಸಲಾಗಿದೆ. ಆರೋಪಿಗಳಿಂದ ಜೂಜಿಗೆ ತೊಡಗಿಸಿದ 1200ರೂ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
Leave a Comment