ಹೊನ್ನಾವರ ,ಯಶೋಧÀರ ನಾಯ್ಕ ಟ್ರಸ್ಟ ವತಿಯಿಂದ ಗ್ರಾಮೀಣ ಮಹಿಳೆಯರ ಸಬಲೀಕರಣ ಯೋಜನೆಯಡಿ ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ನಡೆಯಿತು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಎನ್ ಎಸ್ ಹೆಗಡೆ ಮಾತನಾಡಿ ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ,ಅವರ ಯೋಜನೆ ಶ್ಲಾಗನೀಯ,ಟ್ರಸ್ಟ ವತಿಯಿಂದ ಶೈಕ್ಷಣಿಕ,ಕ್ರೀಡೆ,ಸಂಸ್ಕ್ರತಿ,ಕಲೆಗಳಿಗೆ ಪ್ರೊತ್ಸಾಹ ನಿಡಿದೆ, ಮಹಿಳೆ ಸ್ವಾಲಂಭಿಯಾಗಿ ಜೀವನ ನಡೆಸಲು,ಸಮಾಜದಲ್ಲಿ ಗುರುತಿಸಿಕೊಳ್ಳಲು ಯಶೋದರ ನಾಯ್ಕ ಟ್ರಸ್ಟ ಸಹಾಯಕವಾಗಿದೆ.ಇದೇ ರೀತಿ ಈ ಟ್ರಸ್ಟ ಎಲ್ಲಾ ಮಹಿಳೆಯರಿಗು ದಾರಿ ದೀಪವಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಗಾಯತ್ರಿ ಗೌಡ ಮಾತನಾಡಿ ಇಂದು ಮಹಿಳೆಯರು ಸಮಾಜದಲ್ಲಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದಾರೆ,ಈ ಟ್ರಸ್ಟ ವತಿಯಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹಿಳೆಯರು ಸಬಲರಾಗುವಂತೆ ಸಹಾಯ ಹಸ್ತÀ ನೀಡಿದೆ,ಇದೆ ರೀತಿ ಈ ಟ್ರಸ್ಟ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯಲಿ ಎಂದರು.
ನಂತರ ಯಶೋಧರ ಟ್ರಸ್ಟ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ಮತ್ತು ಹೊಲಿಗೆ ಯಂತ್ರ ವಿತರಿಸಲಾಯಿತು. ತಾಲೂಕಿನ ಕರ್ಕಿ,ಚಂದಾವರ,ಹಳದಿಪುರ,ಹೊದ್ಕೆ ಶಿರುರು,ಹೊಸಾಕುಳಿ,ಚಿಕ್ಕನಕೊಡ್,ಕಡಗೇರಿ,ಸಾಲ್ಕೊಡ್ ಸೇರಿದಂತೆ ಇನ್ನು ಅನೇಕ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶೋದರ ನಾಯ್ಕ ಮಾತನಾಡಿ,ನನ್ನ ಜೀವನದಲ್ಲಿ ಯಶಸ್ಸು ಕಾಣಲು ಒಂದು ಹೆಣ್ಣು ಕಾರಣ,4 ರೂಪಾಯಿಂದ ನನ್ನ ಜೀವನ ಆರಂಭವಾಯಿತು,ನಮ್ಮ ಈ ಟ್ರಸ್ಟ ನ ಊದ್ದೇಶ ಮಹಿಳೆಯರು ಯಾರ ಬಳಿಯು ಹಣಕ್ಕಾಗಿ ಅಂಗಲಾಚದೇ ಸಂಪೂರ್ಣವಾಗಿ ಸಬಲಿಕರಣವಾಗವಂತೆÀ ಮಾಡುವುದು,ಪ್ರತಿ ಹಳ್ಳಿಯಲ್ಲು ಬದಲಾವಣೆ ತರುವುದು, ನಮ್ಮ ಟ್ರಸ್ಟ ನಲ್ಲಿ ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಕಾರ್ಯ ನಿರ್ವಹಿಸುತ್ತಾರೆ,ಅವರ ಸಹಕಾರದಿಂದಲೇ ನಮ್ಮ ಟ್ರಸ್ಟ ಬೆಳೆಯಲು ಕಾರಣ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಕಾಂತ ಮೊಗೆರ ತುಕಾರಾಂ ನಾಯ್ಕ , ಮಂಜುನಾಥ ಶರ್ಮಾ, ಕೃಷ್ಣ ಮೂರ್ತಿ ಹೆಬ್ಬಾರ್ (ಪತ್ರಕರ್ತರು, ನಾಗರಿಕ ಪತ್ರಿಕೆ), ಸತ್ಯ ಜಾವಗಲ್, ಸಾಧನಾ ನಾಯ್ಕ , ಕಲ್ಪನಾ ನರೊನ್ಹಾ , ಪೂರ್ಣಿಮಾ ಹೆಗಡೆ , ಅನುಪಮಾ ಜಿ ಮಡಿವಾಳ , ಮೊಹನ್ ನಾಯ್ಕ , ಶಕುಂತಲಾ, ಮಹಾದೆವಿ ನಾಯ್ಕ , ಶೀವಿ ಮುಕ್ರಿ , ಮಹಾದೆವಿ ಮುಕ್ರಿ , ಸೀತಾರಾಮ್ ನಾಯ್ಕ, ಪರಮೇಶ್ವರ ನಾಯ್ಕ, ದೀಪಕ ಶೆಟ ಹರಿಶ್ಚಂದ್ರ ಜಿ ನಾಯ್ಕ ಹರಿಶ ಶೆಟ, ಜಿ.ಕೆ. ಶೇಟ್ , ಮೊಹನ ನಾಯ್ಕ, ಈಶ್ವರ ನ ನಾಯ್ಕ, ನಾಗೆಶ ನಾಯ್ಕ, ಆರ್. ಎಮ್. ನಾಯ್ಕ, ಜಿ.ಎಸ್. ಭಟ್ (ನಿವೃತ್ತ ತಹಶಿಲ್ದಾರರು) ಮತ್ತಿತರರು ಉಪಸ್ಥಿತರಿದ್ದರು.
Leave a Comment