ಹಳಿಯಾಳ: ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಅಲ್ಲದೇ ಸರ್ಕಾರ ವಿರೋಧಪಕ್ಷಗಳ ಟಿಕೆಗಳಿಗೆ ಕಿವಿಗೊಡದೆ ಕೇವಲ ಅಭಿವೃದ್ದಿ ಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು ಹಳಿಯಾಳ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವವೇ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಮಂಗಳವಾರ ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ, ಶಿವಾಲಯಕ್ಕೆ ಭೇಟಿ, ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಸಿದ್ದಿಸಮುದಾಯದ ಫಲಾನುಭವಿ ಜನರಿಗೆ ಚೆಕ್ವಿತರಿಸಿ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ವಿವಿಧ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿ ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ಯುವಕರಿಗೆ ಹಿಂದುಳಿದ ವರ್ಗಗಳ ಮತ್ತೀತರ ಸಮಾಜದ ಅಭಿವೃದ್ದಿಗಾಗಿ ಶ್ರಮಿಸುವ ಮೂಲಕ ಈ ಹಿಂದೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನ ಈಡೇರಿಸಿ ಜನ ಮೆಚ್ಚುಗೆ ಗಳಿಸಿದೆ ಎಂದರು.
ಶಿಲಾನ್ಯಾಸ :- ತುಳಜಾಭವಾನಿ ದೇವಸ್ಥಾನದ ಹತ್ತಿರ ಡೌಗೇರಿ ಕೆರೆಯ ಸುಧಾರಣೆ ಕಾಮಗಾರಿಗೆ ಶಿಲಾನ್ಯಾಸ ನೇರವೆರಿಸಿ ಮಾತನಾಡಿದ ಸಚಿವರು ತಮ್ಮ ಉದ್ಯಮಿ ಸ್ನೇಹಿತರಾದ “ಶ್ರೀ” ಸಿಮೆಂಟ್ ಕಂಪೆನಿ ತಮ್ಮ ಉದ್ಯಮ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿ 99 ಲಕ್ಷ ರೂ,ಗಳನ್ನು ಈ ಕೆರೆ ಸುಧಾರಣೆಗೆ ನೀಡಿದ್ದಾರೆ ಎಂದು ಕಾಮಗಾರಿ ಗುಣಮಟ್ಟದ್ದಾಗಿರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ವಿಕ್ಷಣೆ :- ಸಚಿವರು ಕಿಲ್ಲಾ ಕೋಟೆಯಲ್ಲಿರುವ ಐತಿಹಾಸಿಕ ಮಲ್ಲೀಕಾರ್ಜುನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನದ ಮುಂದಿರುವ “ದೊಡ್ಡ ಕೆರೆ”ಯ ಹಾಗೂ ಕೊಟೆಯಲ್ಲಿರುವ ಪ್ರವಾಸೋಧ್ಯಮ ಇಲಾಖೆಯಿಂದ ಅಭಿವೃದ್ದಿ ಪಡಿಸಲಾಗುತ್ತಿರುವ ಉದ್ಯಾನವನದ ಕಾಮಗಾರಿ ಪರಿಶೀಲನೆ ನಡೆಸಿದರು. ಅದರಂತೆ ಪ್ರವಾಸಿ ತಾಣವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ 95 ಲಕ್ಷ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿರುವ ಮೋತಿ ಕೆರೆ ಹಾಗೂ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿರುವ “ಹೊರಗಿನ ಗುತ್ತೀಗೇರಿ” ಕೆರೆಗಳಿಗೆ ಭೇಟಿ ನಿಡಿ ಕಾಮಗಾರಿಯನ್ನು ವಿಕ್ಷೀಸಿದರು.
ಚೆಕ್ ವಿತರಣೆ :- ನಂತರ ಪಟ್ಟಣದ ಜನಜ್ಜೀವನರಾವ ಭವನದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದಿ ಸಮುದಾಯದ ಫಲಾನುಭವಿಗಳಿಗೆ ಮನೆ ದುರಸ್ಥಿಗಾಗಿ ಮಂಜುರಾದ ಸಹಾಯ ಧನದ ಚೆಕ್ಗಳನ್ನು ವಿತರಿಸಿ ಮಾತನಾಡಿ ಸಿದ್ದಿ ಸಮುದಾಯದ ಏಳ್ಗೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಸಚಿವರೊಂದಿಗೆ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದು ಸರ್ಕಾರದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಉಮೇಶ ಬೊಳಶೆಟ್ಟಿ, ರಿಯಾನಾ ಬೆಟಗೇರಿ, ಮಾದವಿ ಬೆಳಗಾಂವಕರ, ಗಾಯತ್ರಿ ನೀಲಜಕರ, ಡಿಎಫ್ಓ ಡಾ.ಎಸ್ ರಮೇಶ, ಎಸಿಎಫ್ ಸಂತೊಷ ಕೆಂಚಪ್ಪನವರ, ಆರ್.ಎಫ್ಓ ಪ್ರಸನ್ನ ಸುಭೇದಾರ, ನಿವೃತ್ತ ನೇವಲ್ ಕಮಾಂಡರ ಉಮಾಕಾಂತ ದೇಶಪಾಂಡೆ ಇತರರು ಇದ್ದರು.
Leave a Comment