ಹೊನ್ನಾವರ; ಶರಾವತಿ ನದಿಯಿಂದ ಅಕ್ರಮ ಮರಳು ಸಾಗಿಸುತ್ತಿದ 4 ಬೋಲೇರೊ ವಾಹನಗಳ ಮೇಲೆ ಪೋಲಿಸರು ದಾಳಿ ಮಾಡಿ ವಾಹನ ಮತ್ತು ಮರಳು ಜಪ್ತು ಮಾಡಿದ್ದು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಕಾಸರಕೋಡ ಕಳಸಿನಮೂಟೆಯ ಸೇತುವೆ ಬಳಿ ಜರುಗಿದೆ.
ಸಾರ್ವಜನಿಕರು ದೂರವಾಣಿಯಲ್ಲಿ ಮಂಕಿ ಠಾಣೆಯ ಪಿಎಸೈ ಸುಬ್ಬಣ್ಣ ಇವರಿಗೆ ಗುರುವಾರ ಬೆಳಿಗ್ಗೆ ಮಾಹಿತಿ ನೀಡಿ ಶರಾವತಿ ನದಿಯಿಂದ ಅಕ್ರಮವಾಗಿ ವಾಹನಗಳಲ್ಲಿ ಮರಳು ಸಾಗಿಸುತ್ತಿದ್ದಾರೆ ಎಂದು ತಿಳಿಸಿದ ಹಿನ್ನೆಲೆ ಪೋಲಿಸರು ದಾಳಿ ನಡೆಸಿದಾಗ 4 ಬೋಲೆರೋ ವಾಹನದಲ್ಲಿ ಮರಳು ಸಾಗಿಸುತ್ತಿದ್ದ ಕೆಎ47-7385, ಕೆಎ31-9405, ಕೆಎ47-3748, ಕೆಎ14 ಬಿ1548 ವಶಪಡಿಸಿಕೊಂಡು ಜಪ್ತುಮಾಡಲಾಗಿದೆ. ಮರಳು ಹಾಗೂ ವಾಹನದ ಮೌಲ್ಯ 6ಲಕ್ಷದ 4ಸಾವಿರ ಎಂದು ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ರವರ ಸೂಚನೆಯಂತೆ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೋಲಿಸರು ಬಲೆಬಿಸಿದ್ದಾರೆ.
Leave a Comment