ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಆವೃತ್ತವಾದ ದ್ವೀಪ ಪ್ರದೇಶದಲ್ಲಿ ನೆಲೆನಿಂತ ಮಾವಿನಕುರ್ವಾ ಗ್ರಾಮ ದೇವರಾದ ಆಮ್ರಪುರಾಧೀಶ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ನಡೆಯಲಿದೆ.
ಚೈತ್ರ ಶುದ್ಧ ಚತುರ್ದಶಿ 29ರಂದು ಗುರುವಾರ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗರುಡಾರೋಹಣ, ಯಜ್ಞಾರಂಭ ಪ್ರಾರಂಭವಾಗಿ ರಾತ್ರಿ ಗರುಡ ರಥೋತ್ಸವ, 30 ರಂದು ಶುಕ್ರವಾರ ಪುಪ್ಪ ರಥೋತ್ಸವ ನಡೆಯಲಿದೆ. 31ರ ಶನಿವಾರ ಚೈತ್ರ ಶುದ್ಧ ಪೂರ್ಣಿಮೆಯ ಹನುಮ ಜಯಂತಿಯಂದು ಬಲಿ ಪ್ರದಾನ, ದೇವರಿಗೆ ವಿಶೇಷ ಪುಷ್ಪಾಲಂಕಾರ, ಶ್ರೀ ದೇವರ ಮಹಾರಥೋತ್ಸವ ನಂತರ ಮಹಾ ಅನ್ನಸಂತರ್ಪಣೆ, ಉತ್ಸವಾದಿ ಕಾರ್ಯಕ್ರಮ ಹಾಗೂ ಎಪ್ರೀಲ್ 1ರಂದು ಅವಬೃತೋತ್ಸವ (ಓಕುಳಿ) ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮೀತಿಯ ಅಧ್ಯಕ್ಷ ಅರುಣ ಜಿ. ಭಕ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment