ಹಳಿಯಾಳ :- ಕಾಂಗ್ರೇಸ್ ಜಾತ್ಯಾತೀತ ಪಕ್ಷವಾಗಿದ್ದು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಸಮಾಜದ ಅಭಿವೃದ್ದಿಗಾಗಿಯೇ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಶಿವಾಜಿ ವೃತ್ತದ ಹತ್ತಿರವಿರುವ ಪುರಸಭೆಯ ಆವರಣದಲ್ಲಿ ನಿರ್ಮಿಸಲಾಗುವ ಪುರಸಭೆಯ ನೂತನ ಕಟ್ಟಡದ ಮತ್ತು ಟೌನ್ ಹಾಲ್ ಕಾಮಗಾರಿಗೆ ಅಡಿಗಲ್ಲು ನೆರವೆರಿಸದರು. ನಂತರ ಪಶುಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆದೇಶಪತ್ರ, ಆಶ್ರಯ ಯೋಜನೆಯಡಿ ಪಟ್ಟಾ ವಿತರಣೆ, ಇತರ ಸೌಲಭ್ಯಗಳ ವಿತರಣೆ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಿರಿಯ ಕುಸ್ತಿ ಕ್ರೀಡಾಪಟುಗಳಿಗೆ ಮಾಸಾಶನ ವಿತರಿಸಿ ಮಾತನಾಡಿದರು. ರೈತರು ದೇಶದ ಬೆನ್ನೆಲುಬು ಅನ್ನದಾತ ಎನ್ನುವ ಮೋದಿ ಅವರು ಭಾಷಣದಲ್ಲಿಯೇ ಉದ್ಯೋಗ, ಅಭಿವೃದ್ದಿ ಬಗ್ಗೆ ಭರಸವೆ ನೀಡುತ್ತಾ ಹೋದರೆ ವಿನಃ ಅದರಲ್ಲಿ ಒಂದನ್ನು ಕೂಡ ಈಡೇರಿಸದ ಕೇವಲ ಬಿಜೆಪಿ ಪ್ರಚಾರ ಪ್ರೀಯ ಸರ್ಕಾರವಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ನಾವು ಕೂಡ ಹಿಂದೂಗಳೇ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆಯಿಂದ ನಮಗ್ಯಾರಿಗೂ ಉಪದೇಶದ ಅವಶ್ಯಕತೆ ಇಲ್ಲ, ಪ್ರಚೋದನಾತ್ಮಕ ಭಾಷಣ ಮಾಡಿ ಸತ್ತವರ ಕುಟುಂಬದ ಸಂಕಷ್ಟಕ್ಕೆ ನೆರವಾಗದೆ ಅದನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿರುವ ಈ ಸಂಸದ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಆದರೂ ಏನು ? ಎಂದು ಪ್ರಶ್ನೀಸಿದರು. ಸಚಿವರಿಂದ ವಿವಿಧ ಕಾಮಗಾರಿಗಳ ಉಧ್ಘಾಟನೆ-ಶಂಕುಸ್ಥಾಪನೆ:- ಪಟ್ಟಣದ ಕಾಕರ ಗಲ್ಲಿಯಲ್ಲಿ ಮಂಜೂರಾದ ಮಸೀದಿಗೆ ಅಡಿಗಲ್ಲು, ಚೌಹಾನ್ ಪ್ಲಾಟನಲ್ಲಿ ನಿರ್ಮಿಸಲಾದ ಸಮುದಾಯ ಭವನದ ಉಧ್ಘಾಟನೆ ನೆರವೆರಿಸಿದ ನಂತರ ಸಚಿವರ ಕಾರ್ಯಾಲಯದಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆಯಲ್ಲಿ ಕಾಳಿನದಿಯಿಂದ ತಾಲೂಕಿನ ಕೆರೆ ಬಾಂದಾರುಗಳಿಗೆ ನೀರು ತುಂಬುವ ಕಾಮಗಾರಿ ಯೋಜನೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಚರ್ಚಸಿದ ಸಚಿವರು ನಂತರ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶಾಲಾ ಕೊಠಡಿಗಳ ಉಧ್ಗಾಟನೆ ಹಾಗೂ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಸಂಜು ಮಿಶ್ಯಾಳಿ, ಲಕ್ಷ್ಮೀ ಕೊರ್ವೆಕರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಖಯ್ಯಾಮ ಮುಗದ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಪುರಸಭೆಯ ಸದಸ್ಯರು, ಮುಖ್ಯಾಧಿಕಾರಿ ಕೇಶವ ಚೌಗಲೆ, ರಾಮಚಂದ್ರ ಮೋಹಿತೆ, ಪಿಎಸ್ಐ ಆನಂದಮೂರ್ತಿ, ಹೆಸ್ಕಾಂನ ರವೀಂದ್ರ ಮೆಟಗುಡ್ಡ, ಕ್ರಷಿ ಅಧಿಕಾರಿ ನಾಗೇಶ ನಾಯ್ಕ, ಪಿಡಬ್ಲೂಡಿ ಎಈಈ ಆರ್.ಎಚ್.ಕುಲಕರ್ಣಿ, ಪ್ರಮುಖರಾದ ಗುಲಾಬಷಾ ಇದ್ದರು.
Leave a Comment