ಹೊನ್ನಾವರ. ತಾಲೂಕಿನ ಕರ್ಕಿ ನಾಕಾ ಹತ್ತಿರ ಅಕ್ರಮ ಗೋ ಸಾಗಾಣಿಕೆ ವಾಹನವನ್ನು ತಡೆದ ಘಟನೆಯ ಸಂದರ್ಭದಲ್ಲಿ ಆ ಮಾರ್ಗವಾಗಿ ಹಾದು ಹೋಗುತ್ತಲಿದ್ದ ಜಿಲ್ಲಾ ಕಬಡ್ಡಿ ಅಶೋಸಿಯೇಶನ್ ಅಧ್ಯಕ್ಷ ನಾಮಧಾರಿ ಸಮಾಜದ ಪ್ರಮುಖರಾದ ಸೂರಜ್ ನಾಯ್ಕ ಸೋನಿ ಹಾಗೂ ಇತರ ಕೆಲವು ಪ್ರಮುಖರÀನ್ನು ವಿನಾಕಾರಣ ಹೊಣೆಗಾರರನ್ನಾಗಿ ಮಾಡಿ ಸೆಕ್ಷನ್ 307 ರ ಅಡಿಯಲ್ಲಿ ಕೊಲೆಯತ್ನದ ಆರೋಪ ಹೊರಿಸಿ ಬಂಧಿಸಿರುವುದು ವಿಷಾಧನೀಯ ಮತ್ತು ಖಂಡನೀಯ ಎಂದು ಹೊನ್ನಾವರ ತಾಲೂಕ ನಾಮಧಾರಿ ಅಭಿವೃದ್ದಿ ಸಂಘ ಮಾನ್ಯ ರಾಜ್ಯ ಪಾಲರನ್ನು ಆಗ್ರಹಿಸಿದೆ. ಸೂರಜ್ ನಾಯ್ಕ ಸೋನಿಯವರ ಸಮಾಜ ಸೇವೆ ಮತ್ತು ರಾಜಕೀಯ ಬೆಳವಣಿಗೆಯನ್ನು ಸಹಿಸಲಾರದ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ಆಡಳಿತ ವ್ಯವಸ್ಥೆ ಬಂಧಿಸಿರುವದನ್ನು ಖಂಡಿಸಿ ಹೊನ್ನಾವರ ತಾಲೂಕ ನಾಮಧಾರಿ ಅಭಿವೃದ್ದೀ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕ, ಗೇರುಸೊಪ್ಪಾ ಕಾರ್ಯದರ್ಶಿ ವಾಮನ ನಾಯ್ಕ ಮಂಕಿ, ಇವರ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರಾದ ವಿ.ಜಿ.ನಾಯ್ಕ, ಹೊನ್ನಾವರ ಹಾಗೂ ಪದಾದಿಕಾರಿಗಳು ಸೇರಿ ಮಾನ್ಯ ರಾಜ್ಯಪಾಲರಿಗೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ, ಮಾನ್ಯ ತಹಶೀಲ್ದಾರ ಹೊನ್ನಾವರರವರ ಮೂಲಕ ಮನವಿ ಅರ್ಪಿಸಿ ಸೂರಜ್ ನಾಯ್ಕ ಸೋನಿಯ ಹಾಗೂ ಇತರ ಕೆಲವು ಪ್ರಮುಖರ ಬಿಡುಗಡೆಗೆ ಆಗ್ರಹಿದ್ದಾರೆ.
Leave a Comment