• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾವ್ಯ ಸಮೀಕ್ಷೆ, ಪುಸ್ತಕ ಬಿಡುಗಡೆ,ಸನ್ಮಾನ ಹಾಗೂ ಗೀತಗಾಯನ ಕಾರ್ಯಕ್ರಮ

April 9, 2018 by Gaju Gokarna Leave a Comment

ಹೊನ್ನಾವರ :

ತಾಲೂಕಿನ ಸೋಶಿಯಲ್ ಕ್ಲಬ್‍ನಲ್ಲಿ ಶ್ರೀ ನಾರಾಯಣ ಸಾಹಿತ್ಯಿಕ, ಸಾಂಸ್ಕøತಿಕ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ದೀಪ ಬೆಳಗಿ ಉದ್ಘಾಟಿಸಿನಂತರಮಾತನಾಡಿ ಬೆಳಕಿನ ಕಡೆಗೆ ಮುಖ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು ಮುಂದಿನ ದಿನಗಳಲ್ಲಿ ಪ್ರಶಸ್ತಿಯನ್ನೂ ಕೊಟ್ಟು ಗುರುತಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಎಂದುರು.
ಪಂಪ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಬಿ.ಎ ಸನದಿಂ ಅಧ್ಯಕ್ಷತೆಯನ್ನು ವಹಿಸಿಮಾತನಾಡಿ ಪ್ರತಿಷ್ಠಾನದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸದಾ ಕ್ರಿಯಾಶೀಲವಾಗಿ ಮುಂದುವರೆಯಲಿ ಎಂದು ಹರಸಿದರು.
ಕಾರ್ಯಕ್ರಮದಲ್ಲಿ ಡಾ,ಸುರೇಶ ನಾಯ್ಕರ ‘ಕನಕದಾಸರ ನಡೆ ನುಡಿಗಳ ವಿಭಿನ್ನ ನೆಲೆಗಳು’ ಕೃತಿಯನ್ನು ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಬಿಡುಗಡೆಗೊಳಿಸಿ ಬಹುಮುಖಿ ವ್ಯಕ್ತಿತ್ವದ ಸುರೇಶ ನಾಯ್ಕ ಕಥೆ, ಕವನ, ವಿಮರ್ಶೆ, ಸಂಶೋಧನೆ ಹೀಗೆ ವಿಭಿನ್ನವಾಗಿ ತೊಡಗಿಕೊಂಡಿದ್ದು ಕನಕದಾಸರ ಕುರಿತ ಕೃತಿ ಅಧ್ಯಯನಯೋಗ್ಯವಾಗಿದೆ ಎಂದರು.
ಕೃತಿಯನ್ನು ಡಾ. ಡಿ.ಎಸ್ ದೊಡ್ಮನಿ ಪರಿಚಯಿಸಿ ಕನಕದಾಸರನ್ನು ಬೇರೆ ಬೇರೆ ನೆಲೆಗಳಲ್ಲಿ ಅರ್ಥಮಾಡಿಕೊಳ್ಳಲು ಕೃತಿ ಉತ್ತಮ ಆಕರವಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀಮತಿ ಕನ್ನಿಕಾ ಹೆಗಡೆ ಅವರ ಕಾವ್ಯದ ಕುರಿತು ಡಾ.ಶ್ರೀಧರ ಉಪ್ಪಿನಗಣಪತಿ ಮಾತನಾಡಿ ಕನ್ನಿಕಾ ಹೆಗಡೆ ಕಾವ್ಯ ತನ್ನ ದಿಟ್ಟ ನಿಲುವುಗಳಿಂದಾಗಿ ಅದ್ಬುತ ಸಂಚಲನ ಉಂಟುಮಾಡುವಂತಿತ್ತು ಎಂದರೆ ಡಾ. ರಂಗನಾಥ ಕಂಟನಕುಂಟೆ ಕವಿಯತ್ರಿಯನ್ನು ಸರಿಯಾಗಿ ಪರಿಚಯಿಸಿ ಅಥರ್Àಮಾಡಿಕೊಳ್ಳುವಲ್ಲಿ ಇಡಿಯಾಗಿ ಸಾರಸ್ವತಲೋಕವೇ ಎಡವಿತು ಅನ್ನಿಸುತ್ತದೆ ಎನ್ನುತ್ತ ಪ್ರಮುಖ ಕವಯತ್ರಿಯರ ಸಾಲಿನಲ್ಲಿ ನಿಲ್ಲಬಹುದಾದ ಪ್ರತಿಭೆ ಎಂದು ಅಭಿಪ್ರಾಯಪಟ್ಟರು
.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರೊ ನಾಗರಾಜ ಹೆಗಡೆ ಅಪಗಾಲ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕನ್ನಿಕಾ ಹೆಗಡೆಯವರ ಅಪ್ರಕಟಿತ ಕವನಗಳನ್ನು ಕೃತಿರೂಪದಲ್ಲಿ ತರಲು ಪ್ರಯತ್ನ ಮುಂದುವರೆಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜನಪದ ಹಾಡುಗಾರ್ತಿ ಗಣಪಿ ಗೋವಿಂದ ಗೌಡ ಹೊಸಪಟ್ಟಣ ಹಾಗೂ ಪಾರಂಪರಿಕ ವೈದ್ಯ ಪ್ರಕಾಶ ಪಿ. ರಾಯಸ್ ಇವರನ್ನು ನಿವೃತ್ತ ಶಿಕ್ಷಕ ಎಸ್.ಜಿ.ನಾಯ್ಕ ಕುಮಟಾ ಸನ್ಮಾನಿಸಿ ಖುಷಿ ವ್ಯಕ್ತಪಡಿಸಿದರು.
.
ಇತ್ತೀಚೆಗೆ ಪಿ.ಎಚ್.ಡಿ ಪದವಿ ಪಡೆದ ಉಪನ್ಯಾಸಕ ಮಾಳಗಿಮನಿ, ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಹಾಗೂ ಹಾಡುಗಾರ ಚಂದ್ರಶೇಖರ ಕೇದಿಲಾಯರವರನ್ನು ಪ್ರತಿಷ್ಠಾನದಿಂದ ಗೌರವಿಸಲಾಯಿತು
.ಸನ್ಮಾನಪತ್ರವನ್ನು ಉಪನ್ಯಾಸಕ ಹೊನ್ನಪ್ಪಯ್ಯ ಗುನಗ ಹಾಗೂ ಜನಾರ್ದನ ಹರನೀರು ವಾಚಿಸಿದರೆ ಶಿಕ್ಷಕಿ ಕಲ್ಪನಾ ಹೆಗಡೆ ನಿರೂಪಿಸಿದರು. ಉಪನ್ಯಾಸಕಿ ಲತಾ ನಾಯ್ಕ ್ನ ವಂದಿಸಿರು. ಶಿಕ್ಷಕ ವಿನಾಯಕ ಶೆಟ್ಟಿ, ಮಂಜುನಾಥ ಜಿ, ಸತೀಶ ನಾಯ್ಕ ಇವರು ಸಹಕರಿಸಿದು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಎನ್.ಆರ್.ನಾಯಕ, ಕೃಷ್ಣ ಶರ್ಮ, ವೆಂ.ಬ.ವಂದೂರು ಮೊದಲಾದವರು ಉಪಸ್ಥಿತರಿದ್ದರು.

watermarked 08 hnr Shri narayana Pro report 8 4 2018.02

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಕನ್ನಿಕಾ ಹೆಗಡೆ, ಕವನ, ಕಾರ್ಯಕ್ರಮ, ಕಾವ್ಯ ಸಮೀಕ್ಷೆ, ಗೀತಗಾಯನ, ಪುಸ್ತಕ ಬಿಡುಗಡೆ, ವಿಭಿನ್ನ, ವಿಮರ್ಶೆ, ಸನ್ಮಾನ, ಸಂಶೋಧನೆ, ಸಂಶೋಧನೆ ಹೀಗೆ ವಿಭಿನ್ನ, ಸುರೇಶ ನಾಯ್ಕ ಕಥೆ, ಸೋಶಿಯಲ್ ಕ್ಲಬ್‍, ಹೀಗೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...