ಹೊನ್ನಾವರ : ಇಷ್ಠಾರ್ಥಸಿಧ್ಧಿ ಕರುಣಿಸುವ ವಿನಾಯಕನೆಂದೇ ಪ್ರತೀತಿ ಇರುವ ತಾಲೂಕಿನ ಅಳ್ಳಂಕಿಯ ಪ್ರಸಿದ್ಧ ಶ್ರೀ ವರಸಿಧ್ಧಿಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವವು ಎಪ್ರಿಲ್ 13ರಂದು ವೇ/ಮೂ/ಕಟ್ಟೆ ಶಂಕರ ಭಟ್ಟರ ಅಧ್ವರ್ಯತನದಲ್ಲಿ ನೆರವೇರಲಿದೆ.
ಅಂದು ಬೆಳಿಗ್ಗೆ 9 ರಿಂದ ಸಂಜೆ 8 ರತನಕ ದೇವತಾಕಾರ್ಯಗಳು ನಡೆಯಲಿದ್ದು ಮಧ್ಯಾಹ್ನ ಮಹಾಅನ್ನಸಂತರ್ಪಣೆ ಪ್ರಸಾದ ಮತ್ತು ಸಂಜೆ 9ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಕುಂದಾಪುರದ ರೂಪಕಲಾಬಳಗದವರಿಂದ “ಮೂರುಮುತ್ತು” ,ಹಾಸ್ಯಮಯ ನಗೆನಾಟಕ ಪ್ರದರ್ಶನ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿಯ ಚಂದ್ರಕಾಂತ ಕೊಚರೇಕರ ಪತ್ರಿಕಾ ಪ್ರಕಟಣೆ
ತಿಳಿಸಿದ್ದಾರೆ.
Leave a Comment