ಹೊನ್ನಾವರ:
ತಾಲೂಕಿನ ಕಾಸರಕೋಡ ಚೆಕ್ ಪೋಸ್ಟ ಬಳಿ ಸೋಮವಾರ ತಡರಾತ್ರಿ ಅಕ್ರಮವಾಗಿ 17 ಜಾನುವಾರು ಕದ್ದು ಲಾರಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಹೊನ್ನಾವರ ಪೋಲೀಸರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಜಾನುವಾರು ಸಾಗಿಸುತ್ತಿದ್ದ ಆರೋಪಿ ಬೈಲಹೊಂಗಲದ ದಾದಾಖಲಂದರ್ ಅಲಿಯಾಸ್ ರಾಜೇಸಾಬ್ ಮುಜಾವರ್ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸವದತ್ತಿಯ ಗೌಡಪ್ಪ, ಲಾರಿ ಮಾಲಿಕ ರಫಿಕ್ ತಲೆಮರೆಸಿಕೊಂಡಿದ್ದಾನೆ.
ವಾಹನದಲ್ಲಿ 9 ಕೋಣ,7 ಎತ್ತು, 1 ಎಮ್ಮೆ, ಸೇರಿ ಸುಮಾರು 1.60 ಲಕ್ಷ ರೂ ಮೌಲ್ಯದ 17 ಜಾನುವಾರನ್ನು ಎಲ್ಲಿಂದಲೋ ಕದ್ದು ಅಕ್ರಮವಾಗಿ ಹಿಂಸಾತ್ಮಕವಾಗಿ ಕಸಾಯಿಖಾನೆಗೆ ಸಾಗಿಸಲಾಗುತಿತ್ತು.ಹೊನ್ನಾವರ ಸಿಪಿಐ ಚೆಲುವರಾಜು, ಮಾರ್ಗದರ್ಶನದಲ್ಲಿ ವಿಚಾರಣೆಗೆ ಪೊಲೀಸ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಾನುವಾರುಗಳನ್ನು ರಕ್ಷಿಸಿ ಹೊಸಾಡ ಗೋಶಾಲೆಗೆ ನೀಡಲಾಗಿದೆ. ಪರಾರಿಯಾದ ಆರೋಪಿಗಳ ಶೋಧಕ್ಕೆ ಕ್ರಮ ಕೈಗೊಳ್ಳಲಾಗಿದೆ.
Leave a Comment