ಹೊನ್ನಾವರ: ಕಲ್ಲಿದ್ದಲು ತುಂಬಿದ ಲಾರಿ ಚಾಲನಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೊನ್ನಾವರ: ಕಲ್ಲಿದ್ದಲು ತುಂಬಿದ ಲಾರಿ ಚಾಲನಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಕಾರವಾರ ಕಡೆಗೆ ಸಾಗುತ್ತಿತ್ತು. ಹೆದ್ದಾರಿ ಮಧ್ಯ ಪಲ್ಟಿಯಾದ ಪರಿಣಾಮ ಕಲ್ಲಿದ್ದಲು ರಸ್ತೆಯಲ್ಲಿ ಹರಡಿ ಬಿದ್ದು ವಾಹನ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಯಿತು. ರಸ್ತೆಯಲ್ಲಿ ಬಿದ್ದ ಕಲ್ಲಿದ್ದಲ ದೂಳುನಿಂದ ಪ್ರಯಾಣಿಕರು ಪರದಾಡುವಂತಾಯಿತು. ಸ್ಥಳಕ್ಕೆ ಪೋಲಿಸ್ರು ಆಗಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದರು. ಮಧ್ಯಾಹ್ನ ವೇಳೆಗೆ ಕ್ರೇನ್ ಮೂಲಕ ಲಾರಿಯನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಚಾರಕ್ಕೆ ವ್ಯತ್ಯಯವುಂಟಾಗಿ ವಾಹನ ಸವಾರರು ಹೆದ್ದಾರಿಯಲ್ಲಿ ಸುಮಾರು 2 ಕಿ.ಮೀ. ಗಳಷ್ಟು ದೂರದವರೆಗೆ ವಾಹನ ನಿಲ್ಲಿಸಿ ಬಿಸಿಲನ ಜಳಕ್ಕೆ ಕಂಗೆಟ್ಟರು. ಮದುವೆ ಮುಹೂರ್ತಕ್ಕೆ ತಲುಪಬೇಕಿದ್ದ ವಾಹನಗಳು ಒಂದು ತಾಸು ವಿಳಂಬವಾಗಿ ಕಲ್ಯಾಣಮಂಟಪಕ್ಕೆ ಬಂದು ಪರದಾಡಿದರು. ಹೆದ್ದಾರಿಯಲ್ಲಿ ಹರಡಿದ್ದ ಕಲ್ಲಿದ್ದಲನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
Leave a Comment