ಹೊನ್ನಾವರ : ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಸೂಚನೆಯ ಮೇರೆಗೆ ಕೆ.ಪಿ.ಸಿ.ಸಿ. ಕೂಲಿಕಾರರ ರಾಜ್ಯ ಅಧ್ಯಕ್ಷರಾದ ಎಸ್.ಎಸ್. ಪ್ರಕಾಶಮ್ ಅವರು ಹೊನ್ನಾವರ ತಾಲೂಕಾ ಕಾಂಗ್ರೆಸ್ ಕೂಲಿಕಾರರ ವಿಭಾಗದ ಅಧ್ಯಕ್ಷರನ್ನಾಗಿ ಹೊನ್ನಾವರದ ಚರ್ಚರೋಡ ನಿವಾಸಿಯಾಗಿರುವ ಶ್ರೀಕಾಂತ ಹೂವಯ್ಯ ಮೇಸ್ತ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ.
ಶ್ರೀಕಾಂತ ಮೇಸ್ತ ಅವರು ತಕ್ಷಣ ಅಧಿಕಾರ ಸ್ವೀಕರಿಸಿ ಪಕ್ಷದ ಎಲ್ಲಾ ಹಿರಿಯ ನಾಯಕರನ್ನು ಸಂಪರ್ಕಿಸಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲುವಲ್ಲಿ ಪ್ರಯತ್ನಿಸುವಂತೆ ತಿಳಿಸಲಾಗಿದೆ.
ಶ್ರೀಕಾಂತ ಮೇಸ್ತ ಹೊನ್ನಾವರದ ನವಜ್ಯೋತಿ ಕೂಲಿಕಾರರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
Leave a Comment