ಹಳಿಯಾಳ :- ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಎದುರಾಗಿರುವ ಕರೆನ್ಸಿ ಕೊರತೆ ಸಮಸ್ಯೆಯು ಅತೀ ಶೀಘ್ರ ಬಗೆಹರಿಯಲಿದೆ, ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಮಹಿಳಾ ಮತ್ತು ಶಿಶುಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ಖಾತೆ ರಾಜ್ಯ ಸಚಿವ ಡಾ.ವಿರೇಂದ್ರ ಕುಮಾರ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಆಕಸ್ಮಿಕವಾಗಿ ಎದುರಾಗಿರುವ ಕರೆನ್ಸಿ ಕೊರತೆ ತಾತ್ಕಾಲಿಕ ಸಮಸ್ಯೆಯಾಗಿದ್ದು ಶೀಘ್ರದಲ್ಲೇ ನಿವಾರಣೆ ಆಗಲಿದೆ ಎಂದರು. ಕೇಂದ್ರದಲ್ಲಿರುವ ಮೋದಿ ನೇತ್ರತ್ವದ ಸರ್ಕಾರವನ್ನು ರಾಜ್ಯದ ಜನತೆ ಮೆಚ್ಚಿದ್ದು, ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರಲು ಇಚ್ಛಿಸಿರುವುದು ಕಂಡು ಬರುತ್ತಿದೆ. ಬಿಜೆಪಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಹಳಿಯಾಳದಲ್ಲಿ ಬಿಜೆಪಿಯು ಗೆಲ್ಲುವ ಉತ್ತಮ ಅಭ್ಯರ್ಥಿಗೆ ಟಿಕೇಟ್ ನೀಡಿದೆ. ಸುನೀಲ ಹೆಗಡೆ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದು, ಉತ್ತಮ ಜನಸಂಪರ್ಕವನ್ನು ಹೊಂದಿದ್ದು, ಜನತೆಯ ಸಮಸ್ಯೆಗಳಿಗೆ ಸ್ಫಂದಿಸುವ ವಿಶಾಲವಾದ ಹೃದಯವನ್ನು ಹೊಂದಿದ್ದಾರೆ. ಖಂಡಿತವಾಗಿಯೂ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಬಗ್ಗೆ ಬಿಜೆಪಿ ಹೆಚ್ಚಿನ ನಿಗಾ ವಹಿಸಿದ್ದು ಈ ಕ್ಷೇತ್ರವನ್ನು ನಾವು ಗೆಲ್ಲುತ್ತೆವೆ ಎಂದರು. ಬಿಜೆಪಿ ಕಾರ್ಯಕರ್ತರೊಂದಿಗೆ ಚುನಾವಣಾ ತಯಾರಿ ಕುರಿತು ಸಭೆ ನಡೆಸಿ ಸಂವಾದ ನಡೆಸಿದರು. ಬೂತ ಮಟ್ಟದಿಂದ ಪ್ರಚಾರ ಯಾವ ರೀತಿಯಲ್ಲಿ ನಡೆಸಬೇಕು ಎಂಬ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮಾಜಿ ವಿ.ಪ ಸದಸ್ಯ ವಿ.ಡಿ.ಹೆಗಡೆ, ಘಟಕ ಅಧ್ಯಕ್ಷ ಶಿವಾಜಿ ನರಸಾನಿ, ಮಂಗೇಶ ದೇಶಪಾಂಡೆ, ಅನಿಲ ಮುತ್ನಾಳ, ವಾಸು ಪೂಜಾರಿ, ವಿಲಾಸ ಯಡವಿ, ಸಂತೋಷ ಘಟಕಾಂಬ್ಳೆ. ನೀತಾ ಬಂಡಗಿ, ವಿಜಯ ಬೊಬಾಟಿ, ಸಿದ್ದು ಶೆಟ್ಟಿ ಇದ್ದರು.
Leave a Comment