ಹಳಿಯಾಳ :- ಘೊಟ್ನೇಕರ ಬ್ರದರ್ಸ ಹಳಿಯಾಳದಲ್ಲಿ ಕಂಟ್ರಾಕ್ಟ ಮಾಪಿಯಾ ನಡೆಸ್ತಾ ಇದ್ದಾರೆ. ಬೇರೆ ಯಾರಿಗೂ ಕಂಟ್ರಾಕ್ಟ ನೀಡದೇ ಎಲ್ಲ ಕೆಲಸಗಳನ್ನು ಅವರೇ ಮಾಡುತ್ತಾರೆ ಅದರಲ್ಲಿ ಸಾಕಷ್ಟು ಕಳಪೆ ಕಾಮಗಾರಿ ಮಾಡಿದ್ದು ತಮ್ಮ ಬಳಿ ದಾಖಲೆಗಳಿಗೆ ಈ ಬಗ್ಗೆ ಕ್ಷೇತ್ರದ ಜನತೆ ಕೂಡ ಕೇಳುತ್ತಿದ್ದು ಉತ್ತರಿಸುವ ತಾಕತ್ತು ವಿ.ಪ.ಸದಸ್ಯ ಎಸ್.ಎಲ್.ಘೊಟ್ನೇಕರ ಅವರಲ್ಲಿದೆಯೇ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜು ಧೂಳಿ ಸವಾಲ್ ಹಾಕಿದ್ದಾರೆ. ಪಟ್ಟಣದ ತಮ್ಮ ಖಾಸಗಿ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಎಸ್.ಎಲ್.ಘೊಟ್ನೇಕರ ಅವರು ಸುದ್ದಿಗೊಷ್ಠಿ ನಡೆಸಿ ರಾಜು ಧೂಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲು ವಿನಂತಿ ಮಾಡಿರುವುದಾಗಿ ಹಾಗೂ ಧೂಳಿ ನಾಯಕ ಅಲ್ಲ, ಯಾವುದೇ ಚುಣಾವಣೆ ಗೆದ್ದಿಲ್ಲ ಎಂದು ಆರೋಪ ಮಾಡಿದ್ದು ಅದಕ್ಕೆ ಘೊಟ್ನೇಕರ ಅವರಿಗೆ ಬಹಿರಂಗ ಪತ್ರದ ಮೂಲಕ ಧೂಳಿ ಪಂಥಾವ್ಹಾನ ನೀಡಿದರು. ಈ ಕುರಿತು ಅಧಿಕೃತ ಸಹಿಯೊಂದಿಗೆ ಘೊಟ್ನೇಕರ ಅವರಿಗೆ ರವಾನಿಸಿರುವ ಪಂಥಾವ್ಹಾನದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ನಾನು ಯಾವಾಗ ನಿಮ್ಮ ಕಾಂಗ್ರೇಸ್ನವರ ಬಳಿ ಬಂದು ಪಕ್ಷ ಸೇರ್ಪಡೆ ಆಗುವುದಾಗಿ ಹೇಳಿದ್ದೇ ? ನಿಮಗೆ ದೇವರಲ್ಲಿ ನಂಬಿಕೆ ಇದ್ರೆ ನೀವೇ ಕಟ್ಟಿಸಿದ ನಾಗದೇವತಾ ಮೂರ್ತಿಯನ್ನು ಮುಟ್ಟಿ ನಾನು ಪ್ರಮಾಣ ಮಾಡಲು ತಯಾರಿದ್ದು ನೀವು ತಯಾರಿದ್ದೀರಾ ? ಎಂದು ಪ್ರಶ್ನೀಸಿದ್ದಾರೆ. ನನ್ನನ್ನು ನಾನು ನಾಯಕ ಎಂದು ಯಾವಾಗಲೂ ಹೇಳಿಕೊಂಡಿಲ್ಲ. ನಾನೊಬ್ಬ ಸ್ವಯಂ ಸೇವಕ 1983ರಿಂದ ಹಿಂದೂ ಧರ್ಮ, ಸಮಾಜದ ಹಿತ ರಕ್ಷಣೆಗಾಗಿ ದುಡಿಯುತ್ತಿರುವ ಸಾಮಾನ್ಯ ಸೈನಿಕ ಎಂದಿದ್ದಾರೆ. ಘೊಟ್ನೇಕರ ಅವರಿಗೆ ರಾಜು ಧೂಳಿ 10 ಪ್ರಶ್ನೇಗಳನ್ನು ಹಾಕಿದ್ದು ಅವುಗಳಲ್ಲಿ ಪ್ರಮುಖವಾಗಿ 1993 ರಲ್ಲಿ ಹಳಿಯಾಳ ಗ್ರಾಮದೇವಿ ಜಾತ್ರೆಯ ಅಧ್ಯಕ್ಷರಾಗಿದ್ದ ಘೊಟ್ನೇಕರ ಜಾತ್ರೆಯಲ್ಲಿ 5.45 ಲಕ್ಷ ರೂಪಾಯಿ. ಉಳಿತಾಯವಾಗಿದ್ದು ನೀವೇ ಲೆಕ್ಕ ಕೊಟ್ಟಿದ್ದೀರಿ. ಬ್ಯಾಂಕಿನಲ್ಲಿ ಎಪ್.ಡಿ. ಇಟ್ಟ ಸಾರ್ವಜನಿಕ ಹಣ ಇವತ್ತು ನಿಡಿಲ್ಲ ಸುಮಾರು ಬ್ಯಾಂಕ ಬಡ್ಡಿ ಸಹಿತ 45 ಲಕ್ಷ ರೂಪಾಯಿ ಈ ಹಣದ ಬಗ್ಗೆ ಉತ್ತರ ನೀಡುತ್ತಿರಾ?, 2017 ರಲ್ಲಿ ಶ್ರೀ ದ್ಯಾಮವ್ವಾ ದೇವಸ್ಥಾನವನ್ನು ಸರ್ಕಾರ ಮತ್ತು ಸಾರ್ವಜನಿಕ ಹಣದಲ್ಲಿ ಕಟ್ಟಿದ್ದೀರಿ ಈ ಬಗ್ಗೆ ಇವತ್ತಿನವರೆಗೂ ಜಾತ್ರಾ ಸಮಿತಿಗೆ ಲೆಕ್ಕ ನೀಡದ್ದೀರಾ?, ಹಳಿಯಾಳದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಕಾಮಗಾರಿ ವಿವರ, ನೀವು ಬಿಜೆಪಿ ಸೇರುತ್ತಿರಾ ಅಂತಾ ಹೇಳಿ ಕೇಂದ್ರ ಸರ್ಕಾರದ ಜನೌಷಧಿ ಔಷಧಿ ಅಂಗಡಿ ಪಡೆದುಕೊಂಡಿರುವುದು, ಶ್ರೀ ಲಕ್ಷ್ಮಣರಾವ ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ಕಡೆ ಶಾಲೆ ನಡೆಯುತ್ತಿದ್ದು ಇನ್ನೊಂದು ಕಡೆ ಶಾಲೆ ಕಟ್ಟಡ ಕಾಮಗಾರಿ ನಡೆದಿದ್ದು ಇಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಎನು ಉತ್ತರ ಕೊಡುವಿರಿ ಎಂದು ಪ್ರಶ್ನೀಸಿದ್ದಾರೆ. ನಾನು ನಾಯಕನಾಗಿ ಬೆಳೆದಿದ್ದು ಯಾರ ಚಮಚಾಗಿರಿ ಮಾಡಿ ಅಲ್ಲ ಎಂದು ಕಿಡಿಕಾರಿರುವ ಅವರು ಘೋಟ್ನೇಕರ ಈ ಎಲ್ಲಾ ವಿಷಯಗಳ ಬಗ್ಗೆ ಕೂಡಲೇ ಉತ್ತರಿಸದಿದ್ದರೇ ಎಲ್ಲಾ ವಿಷಯಗಳನ್ನು ನೀವು ಒಪ್ಪಿಕೊಂಡಿದ್ದೀರಿ ಎಂದು ತಿಳಿಯುವುದಾಗಿ ಧೂಳಿ ಹೇಳಿದ್ದಾರೆ.
Leave a Comment