ಹಳಿಯಾಳ :- ಬಿಜೆಪಿಯಲ್ಲಿನ ಒಳಜಗಳ ಟಿಕೇಟ್ ಹಂಚಿಕೆಯಲ್ಲಿ ಮರಾಠರಿಗೆ ನಡೆದ ಅನ್ಯಾಯದಿಂದ ಬೇಸತ್ತಿರುವ ಕೆಲವು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ರಾಜು ದೂಳಿ ಕಾಂಗ್ರೇಸ್ ಬಾಗಿಲು ಬಡಿಯುತ್ತಿದ್ದು ನಾವು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದ ಅವರು ರಾಜು ದೂಳಿ ನಾಯಕರೇ ಅಲ್ಲ ಅವರು ಇವತ್ತಿನವರೆಗೆ ಯಾವ ಚುನಾವಣೆಯನ್ನು ಗೆದ್ದಿಲ್ಲ ಎಂದರು. ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿಯೂ ಭಿನ್ನಮತವಿಲ್ಲ. ಎಲ್ಲರೂ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದರು. ಜಿಲ್ಲೆಯ ಎಲ್ಲ ಆರು ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ. ಶಿರಸಿ ಕ್ಷೇತ್ರದ ಟಿಕೇಟನ್ನು ಭೀಮಣ್ಣ ನಾಯ್ಕ ಅವರಿಗೆ ನೀಡಿದ್ದರಿಂದ ಪಕ್ಷಕ್ಕೆ ಭೀಮಬಲ ಬಂದಿದ್ದೂ, ಈ ಬಾರಿ ಶಿರಸಿ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ ಬಾರಿ ಬಹುಮತದೊಂದಿಗೆ ಗೆಲವು ಸಾಧಿಸಲಿದ್ದಾರೆ. ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆಯವರು ಇಪ್ಪತ್ತು ಸಾವಿರ ಮತಗಳ ಬಹುಮತದಿಂದ ಗೆಲ್ಲಲಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮರಾಠ ಸಮಾಜ ಆರು ಅಭ್ಯರ್ಥಿಗಳಿಗೆ ಟಿಕೇಟ ನೀಡುವ ಮೂಲಕ ಸಮಾಜದ ಬಗ್ಗೆ ತನಗಿರುವ ಕಾಳಜಿಯನ್ನು ತೋರಿಸಿದೆ. ಆದರೆ ಬಿಜೆಪಿಯು ರಾಜ್ಯದಲ್ಲಿಯೂ ಎಲ್ಲಿಯೂ ಒಂದೂ ಸ್ಥಾನವನ್ನು ಮರಾಠರಿಗೆ ನೀಡದೇ ಅನ್ಯಾಯವೆಸಗಿದೆ ಎಂದು ಟೀಕಿಸಿದರು. ಮರಾಠರ ಮೀಸಲಾತಿ ಹೋರಾಟ ಮುಂದುವರೆಯಲಿದ್ದು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದ್ದು ನಮ್ಮ ಬೇಡಿಕೆಯೂ ಈಡೇರಲಿದೆ ಎಂದರು. ದೇಶಪಾಂಡೆಯವರನ್ನು ಗೆಲ್ಲಿಸಲು ಬಿಜೆಪಿ ಮ್ಯಾಚ್ ಪಿಕ್ಸಿಂಗ್ ಮಾಡಿದೆ ಎಂದು ಆರೋಪ ಮಾಡಿರುವ ಎಸ್.ಕೆ.ಗೌಡ ಹೇಳಿಕೆಯಲ್ಲಿ ಹುರಳಿಲ್ಲ. ಬಿಜೆಪಿ ಹೈಕಮಾಂಡ ಮೇಲೆ ಪ್ರಭಾವ ಬೀರುವಲ್ಲಿ ವಿಫಲರಾದ ಹಾಗೂ ಟಿಕೇಟ್ ತರುವ ಸಾಮಥ್ರ್ಯ ತೋರದ ಕೆಲ ಬಿಜೆಪಿ ಮುಖಂಡರು ಈಗ ಟಿಕೇಟ್ ತಪ್ಪಿದ ಅಘಾತದಿಂದ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
Leave a Comment