ಹಳಿಯಾಳ:- ನೀವು ಮಾಡಿರುವ ಅಭಿವೃದ್ದಿ ಹಾಗೂ ನಿಮ್ಮ ಸರ್ಕಾರದ ಅಭಿವೃದ್ದಿ ಏನು ಎಂಬುದನ್ನು ಆಧರಿಸಿ ಮತ ಕೇಳಿ ಹೊರತು ಶಿವಾಜಿ ಮಹಾರಾಜರ ಹೆಸರು ಬಳಸಿ ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠರದಲ್ಲಿ ಗೊಂದಲ ಮೂಡಿಸಿ ಶಿವಾಜಿ ಹೆಸರಿನಿಂದ ಮತಕೇಳಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವು ಭಾಗಗಳಲ್ಲಿ ಶಿವಾಜಿ ಪುಥ್ಥಳಿಗೆ ಕಾಂಗ್ರೇಸ್ ಸರ್ಕಾರ ಹಾಗೂ ದೇಶಪಾಂಡೆ ಅವಕಾಶ ನೀಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷದವರು ಮಹಾನ್ ಪುರುಷರ ಸಾರ್ವಜನೀಕವಾಗಿ ಪುಥ್ಥಳಿ ಸ್ಥಾಪನೆ ಕುರಿತು ಸುಪ್ರಿಂಕೊರ್ಟ ನೀಡಿರುವ ಆದೇಶ ತಿಳಿದಿಲ್ಲವೇ ಪುಥ್ಥಳಿ ಸ್ಥಾಪನೆಗೆ ಸರ್ಕಾರ ಆದೇಶ ನೀಡಿದರೇ ಮಾತ್ರ ಅದು ಸಾಧ್ಯವಾಗುತ್ತದೆ ಈ ವಿಷಯ ಈಗಾಗಲೇ ಸದನದಲ್ಲಿದೆ ಅಲ್ಲದೇ ಈಗ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಪ್ರತಿಷ್ಠಾಪನೆಗೆ ಅವಕಾಶ ದೊರೆತಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ತಾವು ಶಾಸಕರಾಗಿ ಆಯ್ಕೆಯಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರದಲ್ಲಿ ಎಲ್ಲೆಡೆ ಛತ್ರಪತಿ ಶಿವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆ ಮಾಡುತ್ತೇನೆ ಎನ್ನುತ್ತಿರುವುದು ಹೆಗಡೆ ಅವರಿಂದ ಶಿವಾಜಿ ಪುಥ್ಥಳಿ ಸ್ಥಾಪನೆ ಮಾಡಿಕೊಳ್ಳುವಷ್ಟು ದುಸ್ಥಿತಿಗೆ ಸ್ವಾಭಿಮಾನಿ ಮರಾಠರು ಬಂದಿಲ್ಲ ಇದನ್ನು ಅವರು ಅರಿತುಕೊಳ್ಳಲಿ ಈವರೆಗೆ ಯಾವುದೇ ಒಂದು ಶಿವಾಜಿ ಪುಥ್ಥಳಿಗೆ ಸಹಾಯ ನೀಡದ ಅವರು ಚುನಾವಣೆ ಸಂದರ್ಭದಲ್ಲಿ ಮರಾಠಾ ಸಮಾಜದ ಜನರ ದಿಕ್ಕು ತಪ್ಪಿಸಲು ಸುಳ್ಳು ಹೇಳಿಕೆಗಳನ್ನು ನೀಡಿ ಸಮಾಜವನ್ನು ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಸುನೀಲ್ ನಡೆ ಖಂಡನೀಯ ಎಂದರು ಬಹುಸಂಖ್ಯಾತ ಮರಾಠಾ ಸಮಾಜ ಬಹಳ ಕಾಲದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ ಆದ್ದರಿಂದ ಹಲವಾರು ಯೋಜನೆ ಸವಲತ್ತು, ಸೌಲಭ್ಯಗಳಿಂದ ವಂಚಿತವಾಗಿದ್ದು ಸಮಾಜವನು 3ಬಿ ಯಿಂದ 2ಎ ಗೆ ಸೇರ್ಪಡಿಸುವಂತೆ ಆಗ್ರಹಿಸಿ ಈ ಹಿಂದಿನ ಬಿಜೆಪಿ ಹಾಗೂ ಈಗಿನ ಕಾಂಗ್ರೇಸ್ ಸರ್ಕಾರಕ್ಕೂ ಪಕ್ಷಾತೀತವಾಗಿ ಹೊರಾಟ ನಡೆಸಿ ನೂರಾರು ಮನವಿಗಳ ಮೂಲಕ ಆಗ್ರಹಿಸಿದರು ಪ್ರಯೋಜನವಾಗಿಲ್ಲ ಆದರೇ ಪಕ್ಷಾತೀತವಾಗಿರುವ ಏಕ ಮರಾಠಾ ಲಾಖ್ ಮರಾಠಾ -ಸಮಾಜದ ಸಂಘಟನೆಯ ಹೋರಾಟ ಸಮಾಜಕ್ಕೆ ನ್ಯಾಯ ದೊರೆಯುವವರೆಗೂ ಮುಂದುವರೆಯಲಿದೆ ಎಂದರು. ದಿ.8ರಂದು ಸಂಜೆ 4 ಗಂಟೆಗೆ ಹಳಿಯಾಳದ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ಕಾಂಗ್ರೇಸ್ ಪಕ್ಷದ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅನಿಲ ಚವ್ವಾಣ, ಶ್ರೀನಿವಾಸ ಘೊಟ್ನೇಕರ, ಎಲ್.ಎಸ್.ಅರಿಶೀನಗೇರಿ, ತುಕಾರಾಮ ಕೆ ಗೌಡಾ, ಬಿಡಿ ಚೌಗಲೆ, ಸಂಜಯ ಪಾಟೀಲ್, ಶಂಕರ ಬೆಳಗಾಂವಕರ, ವಿಜಯಕುಮಾರ ಕದಂ, ಸಂತೋಷ ಹುಂಡೇಕರ, ರವಿ ತೊರಣಗಟ್ಟಿ ಮೊದಲಾದವರು ಇದ್ದರು.
Leave a Comment