ಹೊನ್ನಾವರ: ಅಜಾಗರೂಕ ಚಾಲನೆಯಿಂದ ಎರಡು ವಾಹನಗಳ ಮದ್ಯೆ ಅಪಘಾತ ಸಂಭವಿಸಿದ ಘಟ£ ತಾಲೂಕಿನ ಕಾಸರಕೋಡ ಇಕೋ ಬೀಚ್ ತಿರುವು ಬಳಿ É ಸಂಭವಿಸಿದೆ.
ಭಟ್ಕಳದಿಂದ ಹೊನ್ನಾವರ ಮಾರ್ಗವಾಗಿ ಚಲಾಯಿಸುತ್ತಿದ್ದ ಜಿಎ-09 9484 ಸಂಖ್ಯೆಯ ಕಂಟೆನರ್ ಹಾಗೂ ಹೊನ್ನಾವರದಿಂದ ಭಟ್ಕಳ ಮಾರ್ಗವಾಗಿ ಚಲಾಯಿಸುತ್ತಿದ್ದ ಎಮ್ಎಚ್-48 7715 ಸಂಖ್ಯೆಯ ರೇತಿ ತುಂಬಿದ ಟಿಪ್ಪರ್ ವಾಹನದ ನಡುವೆ ಅಪಘಾತ ಸಂಬವಿಸಿದ್ದು ಡಿಕ್ಕಿಯ ರಭಸಕ್ಕೆ ಎರಡು ವಾಹನದ ಮುಂಬದಿಯಲ್ಲಿ ಸಂಪೂರ್ಣ ಜಖಂ ಆಗಿದ್ದು ಅದ್ರಷ್ಟವಶಾತ್ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನದ ಕಂಟೆನರ್ ಚಾಲಕ ಉತ್ತರ ಪ್ರದೇಶ ಮೂಲದ ಯೋಗೇಂದರ್ ಸಿಂಗ್ ಎಂಬಾತನ ಬಲಗೈ ಪೆಟಾಗಿದ್ದು, ಟಿಪ್ಪರ್ ಚಾಲಕನನ್ನು ಹಳದಿಪುರದ ವೇಂಕಟೇಶ್ ಸುಬ್ರಾಯ್ ನಾಯ್ಕ ಎಂದು ಗುರುತಿಸಲಾಗಿದೆ.ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಇರ್ವರಿಂದಲೂ ದೂರು, ಪ್ರತಿದೂರು ದಾಖಲಾಗಿದೆ. ಪೋಲಿಸರು ವಾಹನ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Leave a Comment