ಹಳಿಯಾಳ:- ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್ನಂತಹ ಪದ್ದತಿಯನ್ನು ಹೊಗಲಾಡಿಸಿ ಮುಸ್ಲಿಂ ಮಹಿಳೆಯರ ನರಕಯಾತನೆಯನ್ನು ತಪ್ಪಿಸಿದ್ದು ಅಲ್ಲದೇ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅದನ್ನು ಅರಿಯಿರಿ ನಾವು ಯಾರು ಮುಸ್ಲಿಂ ವಿರೋಧಿಗಳಲ್ಲ ರಾಷ್ಟ್ರೀಯತೆಗೆ, ದೇಶಕ್ಕೆ ಒಡಕು ಮಾಡುವ, ದ್ರೋಹ ಬಗೆಯುವವರನ್ನು ಅಷ್ಟೇ ವಿರೋಧಿಸುತ್ತೇವೆ ಹೊರತು ನಾವೆಲ್ಲ ಭಾರತೀಯರು ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಹೇಳಿದರು.ಹಳಿಯಾಳ:- ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್ನಂತಹ ಪದ್ದತಿಯನ್ನು ಹೊಗಲಾಡಿಸಿ ಮುಸ್ಲಿಂ ಮಹಿಳೆಯರ ನರಕಯಾತನೆಯನ್ನು ತಪ್ಪಿಸಿದ್ದು ಅಲ್ಲದೇ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅದನ್ನು ಅರಿಯಿರಿ ನಾವು ಯಾರು ಮುಸ್ಲಿಂ ವಿರೋಧಿಗಳಲ್ಲ ರಾಷ್ಟ್ರೀಯತೆಗೆ, ದೇಶಕ್ಕೆ ಒಡಕು ಮಾಡುವ, ದ್ರೋಹ ಬಗೆಯುವವರನ್ನು ಅಷ್ಟೇ ವಿರೋಧಿಸುತ್ತೇವೆ ಹೊರತು ನಾವೆಲ್ಲ ಭಾರತೀಯರು ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಹೇಳಿದರು. ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಿಂದ ಸಾವಿರಾರು ಕಾರ್ಯಕರ್ತರು, ಮುಖಂಡರೊಂದಿಗೆ ರೋಡಶೋ ಮೂಲಕ ಬಸ್ನಿಲ್ದಾಣ ರಸ್ತೆ, ಕಿಲ್ಲಾ, ಕಸಬಾಗಲ್ಲಿ, ವೀರಕ್ತ ಮಠ, ಮುಖ್ಯಬೀದಿ ಮೂಲಕ ಶಿವಾಜಿ ವೃತ್ತಕ್ಕೆ ಆಗಮಿಸಿ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಇಲ್ಲಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿ ಚುನಾವಣೆಯಲ್ಲೊಂದು ನಾಟಕವಾಡುತ್ತಾ ಜನರನ್ನು ಮರಳು ಮಾಡಿ ಜಾತಿ, ಧರ್ಮಗಳಲ್ಲಿ ಒಡಕು ತಂದು ಓಟಬ್ಯಾಂಕ್ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬಂದು ರಾಜ್ಯದ ಸಂಪತ್ತನ್ನು ಹಗಲು ದರೊಡೆ ಮಾಡುತ್ತಿರುವ ಕಾಂಗ್ರೇಸ್ನ್ನು ಸೋಲಿಸಬೇಕು ಇದು ಆಡಳಿತ ಪಕ್ಷ ಮತ್ತು ಬಿಜೆಪಿಯ ನಡುವಿನ ನೇರ ಯುದ್ದವಾಗಿದ್ದು ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದ್ದು ಜಾತಿಗಳನ್ನು ಒಡೆದು ಕೋಮುವಾದ ಮಾಡುತ್ತಿರುವ ಅಧರ್ಮದ ಹಾದಿಯಲ್ಲಿರುವ ಕಾಂಗ್ರೇಸ್ ಪಕ್ಷವನ್ನು ಸೋಲಿಸುವಂತೆ ಕರೆ ನೀಡಿದರು. ಕಳೆದ 1983ರಿಂದ ಸತತವಾಗಿ 30 ವರ್ಷಗಳ ಕಾಲ ಹಾಗೂ ಮತ್ತೇ ಈಗ 5 ವರ್ಷ ಕಾಲ ರಾಜಕೀಯವಾಗಿ ಅಧಿಕಾರ ಅನುಭವಿಸಿದ ದೇಶಪಾಂಡೆಯವರು ಕ್ಷೇತ್ರದಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆ ಏಕೆ ಮಂಜೂರಿ ಮಾಡಲಿಲ್ಲ ಎಂದು ಹರಿಹಾಯ್ದರು. ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ಸದ್ಯ ಕಾಳಿನದಿ ನೀರಾವರಿ ಯೋಜನೆ ನಿವೇ ಮಂಜೂರಿ ಮಾಡಿದ್ದೀರಿ ಎಂದು ಗ್ರಾಮದೇವಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಹೇಳಿ ಎಂದು ಸವಾಲ್ ಹಾಕಿದ ಸುನೀಲ್ ಹೆಗಡೆ ಸತತವಾಗಿ ಕೈಗಾರಿಕಾ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ದೇಶಪಾಂಡೆ ಅವಧಿಯಲ್ಲಿ ಕ್ಷೇತ್ರದಲ್ಲಿ ಇದ್ದ ಕಾರ್ಖಾನೆಗಳು ಮುಚ್ಚಿವೆ ಹೊರತು ಇವರಿಗೆ ಹಿಟ್ಟಿನ ಗಿರಣಿಯನ್ನು ಪ್ರಾರಂಭಿಸಲು ಆಗದೆ ಇರುವುದು ನಾಚಿಕೆಗೆಡಿನ ಸಂಗತಿ ಎಂದು ಟೀಕಾಪ್ರಹಾರ ನಡೆಸಿದರು. ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಿದರೇ ಮುಂದೆ ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಬರಲಿದ್ದು ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪ ಹಾಗೂ ಪ್ರಧಾನಿ ಮೋದಿಜಿಯವರ ಯೋಜನೆಗಳನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಹಾಗೂ ಬೆಂಗಳೂರಿನಲ್ಲಿ ನೆಲಸದೆ ಕ್ಷೇತ್ರದಲ್ಲಿ ಸಂಚರಿಸಿ ಎಲ್ಲರ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸುವುದಾಗಿ ಸುನೀಲ್ ಹೆಗಡೆ ಘೊಷಿಸಿದರು. ಮರಾಠಾ ಮುಖಂಡ ಅಪ್ಪಾರಾವ ಪೂಜಾರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ, ಶ್ರೀಕಾಂತ ಹೂಲಿ ಮಾತನಾಡಿ ದೇಶದಲ್ಲಿ ಅಪನಗದೀಕರಣ ವ್ಯವಸ್ಥೆಯಿಂದ ಭ್ರಷ್ಟ ಕಾಂಗ್ರೆಸ್ಸಿಗರಿಗೆ ಹಾನಿಯಾಗಿದೆ ತೊಂದರೆ ಆಗಿದೆ ಹೊರತು ಬೇರೆ ಯಾರಿಗೂ ಆಗಿಲ್ಲ ಎಂದು ಬಿಜೆಪಿ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುವರ್ಣಾ ಹೆಗಡೆ, ತಾಲುಕಾಧ್ಯಕ್ಷ ಶಿವಾಜಿ ನರಸಾನಿ, ವಿಎಮ್ ಪಾಟೀಲ್, ಅನಿಲ ಮುತ್ನಾಳ, ಎಸ್ಎ ಶೆಟವಣ್ಣವರ, ನಾರಾಯಣ ಬೆಳಗಾಂವಕರ,ಜಯಲಕ್ಷ್ಮೀ ಚವ್ವಾಣ, ವಿಜಯ, ವಿಲಾಸ ಮೊದಲಾದವರು ಇದ್ದರು.
Leave a Comment