ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಹಳಿಯಾಳ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕಿನಿಂದ ಕೂಡಿರುವುದು ಕಂಡು ಬಂತು ಮಧ್ಯಾಹ್ನದ ಊರಿ ಬಿಸಿಲಿನ ಧಗೆಗೆ ಮತದಾನ ಮಂದಗತಿಗೆ ಸಾಗಿತ್ತು. ಹಳಿಯಾಳದಲ್ಲಿ ಘಟಾನುಘಟಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 10.45 ಗಂಟೆಗೆ ಆಗಮಿಸಿದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ, ಪತ್ನಿ ರಾಧಾಬಾಯಿ, ಹಿರಿಮಗ ಪ್ರಸಾದ ದೇಶಪಾಂಡೆ, ಸೊಸೆಯಂದಿರಾದ ಮೇಘನಾ, ಅವನಿ ಅವರು ಇದೆ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ 9ನೇ ಬಾರಿ ಚುನಾವಣೆ ಎದುರಿಸುವ ಸೌಭಾಗ್ಯ ನನ್ನದಾಗಿದ್ದು ಕಾಂಗ್ರೇಸ್ ಪಕ್ಷದಲ್ಲಿ ಹಿರಿಯ ಸದಸ್ಯನಾಗಿರುವ ನನ್ನ ಗೆಲುವು ನಿಶ್ಚಿತ, ಉತ್ತರ ಕನ್ನಡ ಜಿಲ್ಲೆಯಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಲಿದ್ದು ಕಾಂಗ್ರೇಸ್ನ ಅಭಿವೃದ್ದಿ ವೇಗವೇ ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಅಲ್ಲದೇ ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಸಂದೇಹವೆ ಇಲ್ಲ ಎಂದರು. ಮಾದ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದ ಅವರು ನಾನು ಸಿಎಂ ಕುರ್ಚಿ ಆಕಾಂಕ್ಷಿಯಲ್ಲ ಕಾಂಗ್ರೇಸ್ ಪಕ್ಷದಲ್ಲಿ ಹುದ್ದೆ, ಅಧಿಕಾರ ನೀಡುವಾಗ ಹೈಕಮಾಂಡ ತೀರ್ಮಾನವೇ ಅಂತಿಮ ಅವರು ಏನೇ ಜವಾಬ್ದಾರಿ ನೀಡಿದರು ನಿಭಾಯಿಸಲು ಸಿದ್ದ ಎಂದರು.
Leave a Comment