ಹಳಿಯಾಳ:
ಬಿಜೆಪಿ ಪಕ್ಷವು ರಾಜಭವನವನ್ನು ದುರುಪಯೋಗಪಡಿಸಿ ಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆ ನಡೆಸಿದೆ. ಬಹುಮತವಿಲ್ಲದೇ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಬಹುದಿನ ನಡೆಯದು ಎಂದು ವಿ.ಪ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ.
ತಮ್ಮ ಕಾರ್ಯಾಲಯದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅತೀ ಶೀಘ್ರ ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ನೇತ್ರತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ತಲೆಬಾಗುತ್ತೆವೆ: ರಾಜ್ಯದಲ್ಲಿ ಮತದಾರರು ನೀಡಿದ ಜನಾದೇಶವನ್ನು ಸ್ವಾಗತಿಸಿ ನಾವು ತಲೆಬಾಗುತ್ತೆವೆ. ಸಿದ್ಧರಾಮಯ್ಯ ನೇತ್ರತ್ವದಲ್ಲಿ ಕಾಂಗ್ರೆಸ್ ಸರ್ಕಾರ ಕ್ರಾಂತಿಕಾರಿ ಜನಕಲ್ಯಾಣದ ಯೋಜನೆಗಳನ್ನು ಜಾರಿಗೊಳಿಸಿದ್ದರು, ಮತದಾರರ ಮನವನ್ನು ಗೆಲ್ಲುವಲ್ಲಿ ನಾವು ವಿಫಲರಾದೆವು ಎಂಬ ನೋವು ನಮ್ಮನ್ನು ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಅನುದಾನ ತಂದು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರು ಜಿಲ್ಲೆಯ ಮತದಾರರು ನಮ್ಮನ್ನು ಬೆಂಬಲಿಸಲಿಲ್ಲ. ಅಭಿವೃದ್ಧಿ ಯೋಜನೆಗಳನ್ನು ಮತದಾರರು ಪರಿಗಣಿಸದಿರುವಂತಿದೆ ಎಂದರು. ಮಂಕಾಳ ವೈದ್ಯ, ಶಾರದಾ ಶೆಟ್ಟಿ, ಸತೀಷ ಸೈಲ್ ಮೊದಲಾದವರು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದರೂ ಜನತೆ ಆಶೀರ್ವದಿಸಲಿಲ್ಲ. ಆರ್.ವಿ.ದೇಶಪಾಂಡೆ ಹಾಗೂ ಶಿವರಾಂ ಹೆಬ್ಬಾರ ಹಲವಾರು ಜನಪರ ಯೋಜನೆಗಳನ್ನು ಹಾಗೂ ಕಾಮಗಾರಿಗಳನ್ನು ತಂದರೂ ಸಹ ಮತದಾರರು ಬಹುಮತದಿಂದ ಆರಿಸುವಲ್ಲಿ ಉದಾರ ಹೃದಯ ತೋರಲಿಲ್ಲ ಎಂಬ ದುಖಃವಾಗುತ್ತಿದೆ ಎಂದರು. ಹಳಿಯಾಳ ಪಟ್ಟಣ, ದಾಂಡೇಲಿ ನಗರ ಹಾಗೂ ರಾಮನಗರ ಜಿ.ಪಂ ಕ್ಷೇತ್ರವು ದೇಶಪಾಂಡೆಯವರನ್ನು ಬೆಂಬಲಿಸಿ ಗೆಲ್ಲಿಸಿದ್ದು ಈ ಭಾಗದ ಮತದಾರರಿಗೆ ಚಿರಋಣಿಯಾಗಿದ್ದೆವೆ. ಹಳಿಯಾಳ ತಾಲೂಕಿನ ನಾಲ್ಕು ಜಿ.ಪಂ ಹಾಗೂ ಜೋಯಿಡಾ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆಯನ್ನು ಅನುಭವಿಸಿದ ಬಗ್ಗೆ ಪರಿಶೀಲನೆ ನಡೆಸುತ್ತೆವೆ ಎಂದರು.
ಮಾತಿಗೆ ಬದ್ಧ: ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳನ್ನು ಹಾಗೂ ಕ್ಷೇತ್ರದಲ್ಲಿ ಕೈಗೊಂಡ ಶಾಸ್ವತ ಯೋಜನೆಗಳಾದ ಕಾಳಿ ನೀರಾವರಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ನಿಗದಿತ ಅವದಿಯಲ್ಲಿ ಆರಂಭಿಸುವುದಾಗಿ ಪ್ರಮಾಣ ಮಾಡುತ್ತೆನೆ.
ಸುದ್ದಿಘೋಷ್ಠಿಯಲ್ಲಿ ಮುಖಂಡರಾದ ಅಶೋಕ ಘೋಟ್ನೇಕರ ಪಾಲ್ಗೋಂಡಿದ್ದರು.
Leave a Comment