ಹೊನ್ನಾವರ: ಸ್ಥಳೀಯ ಸರಕಾರಿ ನೌಕರ ಸಂಘ ಕೇವಲ ಸದಸ್ಯರ ಸದಸ್ಯತ್ವಶುಲ್ಕ ಸಂಗ್ರಹಿಸಿ ತಾವು ನಾಯಕರೆಂದು ಮರೆಯಲು ಸಂಘವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಂಘದ 13 ಜನ ಸದಸ್ಯರು ಲಿಖಿತವಾಗಿ ರಾಜ್ಯ ಸಮಿತಿಗೆ ಪತ್ರ ಬರೆದು ದೂರಿದ್ದಾರೆ.
ಈಗಿನ ಕೆಲವು ಪದಾಧಿಕಾರಿಗಳು ಮತ್ತು ಅಧ್ಯಕ್ಷರು ವರ್ಗಾವಣೆ ತಪ್ಪಿಸಿಕೊಳ್ಳಲು ಮತ್ತು ಹಿರೋ ಎಂದು ತೋರಿಸಿಕೊಳ್ಳಲು ಸಂಘ ಬಳಸಿಕೊಳ್ಳುತ್ತಿದ್ದಾರೆ. ಇವರ ಗುಂಪುಗೂಳಿತನದಿಂದ ಸಂಘದ ಸದಸ್ಯರಾಗಿರುವ ಪ್ರೌಢಶಾಲೆಯ ಶಿಕ್ಷಕರೊಬ್ಬರು ಪಿ.ಎಚ್.ಡಿ ಪದವಿ ಪಡೆದು ಸಾಧನೆ ಮಾಡಿದರೆ ಅದನ್ನು ಗುರುತಿಸದೇ ತಮಗೆ ಬೇಕಾದವರಿಗೆ ಯಾವುದೇ ದೊಡ್ಡ ಸಾಧನೆ ಮಾಡದಿದ್ದರೂ ಸನ್ಮಾನ ಮಾಡಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ. “ಭಾಗವಹಿಸಿದವರು ಮೂವರು ಪ್ರಶಸ್ತಿ ಮೂರನೆಯದು” ಅಂಥವರಿಗೂ ಸನ್ಮಾನಿಸಿದ್ದಾರೆ ಎಂದು ಕಟುವಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಕ್ಷಣ ಸಂಘ ವಿಸರ್ಜಿಸಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ಕೋರಿದ್ದಾರೆ.
Leave a Comment