ಹಳಿಯಾಳ : ಬೈಕ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಇಬ್ಬರು ಕಳ್ಳರನ್ನು ಹಳಿಯಾಳ ಪೋಲಿಸರು ಕಳುವು ಮಾಡಲಾದ ದ್ವಿಚಕ್ರ ವಾಹನಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ಮಾರಿಹಾಳ ಗ್ರಾಮದ ಪ್ರವೀಣ ರಾಮಚಂದ್ರ ಪವಾರ ಮತ್ತು ಬೈಲಹೊಂಗಲ್ ಪಟ್ಟಣದ ಇಂದಿರಾನಗರದ ನಿವಾಸಿ ಮೆಹಬೂಬ ಇಸ್ಮಾಯಿಲ್ ಮಕಾನದಾರ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಅಂತರ ಜಿಲ್ಲಾ ಬೈಕ್ ಕಳ್ಳರಾಗಿದ್ದು ಇವರಿಂದ ನಾಲ್ಕು ಹೀರೋ ಹೊಂಡಾ ಮತ್ತು ಒಂದು ಬಜಾಜ್ ಪ್ಲಸರ್ ಬೈಕ್ ಸೇರಿದಂತೆ ಒಟ್ಟೂ ಸುಮಾರು 2 ಲಕ್ಷ ರೂ ಮೌಲ್ಯದ 5 ದ್ವಿಚಕ್ರವಾಹಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ಸುಂದ್ರೇಶ್ ಹೊಳೆಣ್ಣವರ, ಪಿಎಸೈ ಆನಂದ ಮೂರ್ತಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಾಂತೇಶ ಬಾರಕೇರ, ಮಲ್ಲಿಕಾರ್ಜುನ ನಾಯಕ್, ಎ.ಎಮ್.ಪಟೇಲ್ ಅನ್ವರ ಖಾನ್, ಗೋವಿಂದ ಉಪ್ಪಾರ. ಪರಶುರಾಮ ನಾಗರಾಳ, ಜಯನಗೌಡಾ ಪಾಟೀಲ್, ಶನವಾಜ್ ತಡಕೋಡ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
Leave a Comment