ಹಳಿಯಾಳ:- ನಾನು ಕಾಂಗ್ರೇಸ್ ಪಕ್ಷದ ನಾಯಕರ ಮುಲಾಜಿನಲ್ಲಿದ್ದೇನೆ ಹೊರತು 6 ಕೋಟಿ ಕನ್ನಡಿಗರ ಮುಲಾಜಿನಲ್ಲಿ ಇಲ್ಲ ಎಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ಜನತೆಗೆ ಜನತೆಗೆ ದ್ರೋಹ ಎಸಗಿದ್ದು ಪ್ರತಿ ಹಂತದಲ್ಲಿ ವಚನ ಭ್ರಷ್ಟರಾಗುವ, ದ್ವಿಮುಖ ನೀತಿ ತೊರುವ ಕುಮಾರಸ್ವಾಮಿ ಅವರಿಗೆ ರಾಜಕೀಯ ಬಧ್ದತೆ, ನೈತಿಕತೆ ಇದ್ದರೇ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.
ಹಳಿಯಾಳ ಬಂದ್ ತಾತ್ಕಾಲಿಕ ಮುಂದಕ್ಕೆ :- ಸೋಮವಾರ ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ರೈತಪರ ಕಾಳಜಿ ಹೊಂದಿದ್ದ ನಾಯಕ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿ ನ್ಯಾಮಗೌಡರ ನಿಧನದ ಹಿನ್ನೆಲೆ ಹಾಗೂ ಹಿರಿಯ ನಾಯಕರ ಸೂಚನೆಯಂತೆ ಹಳಿಯಾಳದಲ್ಲಿ ಬಂದ್ ನಡೆಸುತ್ತಿಲ್ಲ ಸರ್ಕಾರದ ವಿರುದ್ದ ಹೋರಾಡುವ ರೈತ ಸಂಘಟನೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದು ಇಂದಿನ ಬಂದ ಅನ್ನು ಹಳಿಯಾಳದ ಮಟ್ಟಿಗೆ ತಾತ್ಕಾಲಿಕವಾಗಿ ಮುಂದುಡಲಾಗಿದ್ದು ಮುಂದಿನ ಒಂದು ವಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಸಾಲಮನ್ನಾ ಘೋಷಿಸದೆ ಇದ್ದರೇ ಮತ್ತೇ ಹೋರಾಟ ಮಾಡುವುದು ನಿಶ್ಚಿತ ಎಂದರು. ರಾಜೀನಾಮೆ ನೀಡಿ:- ಅಧಿಕಾರಕ್ಕೆ ಬಂದ 24 ತಾಸಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ 4 ದಿನವಾದರು ಈ ಬಗ್ಗೆ ಮಾತನಾಡುತ್ತಿಲ್ಲ ರೈತಪರ ಹೋರಾಟಗಾರ ಯಡ್ಯೂರಪ್ಪ ಅವರನ್ನು ಅಧಿಕಾರದಿಂದ ವಂಚಿತರನ್ನಾಗಿ ಮಾಡಿ ಭ್ರಷ್ಠ ಕಾಂಗ್ರೇಸ್ನೊಂದಿಗೆ ಅಪವಿತ್ರ ಮೈತ್ರಿಮಾಡಿಕೊಂಡು ಅವರ ಮುಲಾಜಿನಲ್ಲಿ ಸರ್ಕಾರ ನಡೆಸುತ್ತಿರುವ ಎಚ್ಡಿಕೆ ಅವರು ರೈತರ ಸಾಲಮನ್ನಾ ಮಾಡಿ ಇಲ್ಲವೇ ಸಿಎಮ್ ಸ್ಥಾನಕ್ಕೆ ರಾಜಿನಾಮೆ ನೀಡಿ ಎಂದು ಆಗ್ರಹಿಸಿದರು. ಮುತ್ತಿಗೆ ಎಚ್ಚರಿಕೆ :- ಹಳಿಯಾಳದಲ್ಲಿ ರೈತರಿಗೆ ಬಿತ್ತನೆ ಬೀಜಗಳು ಸಿಗುತ್ತಿಲ್ಲ ರೈತರು ಸಮಸ್ಯೆಯಲ್ಲಿದ್ದಾರೆ ಆದರೇ ನೂತನ ಶಾಸಕ ಆರ್.ವಿ.ದೇಶಪಾಂಡೆ ಅವರು ಮಂತ್ರಿಗಿರಿ ಪಡೆಯುವ ಗುಂಗಿನಲ್ಲಿ ಬೆಂಗಳೂರಿನಲ್ಲೇ ಕಾಲಹರಣ ಮಾಡುತ್ತಿದ್ದು ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ಟಿಕಾಪ್ರಹಾರ ನಡೆಸಿ ಹೆಗಡೆ ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ಬೀಜಗಳನ್ನು ಮಾರಾಟ ಮಾಡಿ ರೈತರಿಗೆ ದ್ರೋಹ ಎಸಗಲಾಗುತ್ತಿದ್ದು ಕೂಡಲೇ ಸಮಸ್ಯೆ ಸರಿಪಡಿಸಿ ರೈತರಿಗೆ ಬೀಜಗಳನ್ನು ಪೂರೈಸದಿದ್ದರೇ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಜೂನ್ 5 ರಸ್ತಾರೋಖೊ ಪ್ರತಿಭಟನೆ :- ಹಳಿಯಾಳದ ಸಕ್ಕರೆ ಕಾರ್ಖಾನೆಯವರು ರೈತರ ಬಾಕಿ 305 ಹಣ ನೀಡದೆ ರೈತರಿಗೆ ದ್ರೋಹ ಎಸಗಿದ್ದಾರೆ ಅಲ್ಲದೇ ಕಬ್ಬು ಸಾಗಿಸುವ ವೇ ಬ್ರಿಡ್ಜ್ನ ತೂಕದಲ್ಲಿ ಮೊಸ ಮಾಡುತ್ತಿರುವ ಬಗ್ಗೆ ರೈತರು ದೂರುತ್ತಿದ್ದು ಸಂಶಯ ವ್ಯಕ್ತವಾಗಿದ್ದು ಕೂಡಲೇ ಸರಿಪಡಿಸುವ ಕ್ರಮ ಕಾರ್ಖಾನೆ ಕೈಗೊಳ್ಳಬೇಕು ಇಲ್ಲವಾದರೇ 3 ವರ್ಷದ ಹಣವನ್ನು ರೈತರು ವಸೂಲಿ ಮಾಡಲು ಹಿಂದೆಟು ಹಾಕುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಹೆಗಡೆ ಜೂನ್ 5 ರಂದು ಹಳಿಯಾಳದಲ್ಲಿ ಕಾರ್ಖಾನೆ ವಿರುದ್ದ ರಸ್ತಾರೋಖೊ, ಪ್ರತಿಭಟನಾ ಮೇರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದರು. ಈ ಸಂದರ್ಭದಲ್ಲಿ ರೈತ ಮೊರ್ಚಾದ ಸಾತೂರಿ ಗೊಡಿಮನಿ, ಗಣಪತಿ ಕರಂಜೆಕರ, ಎಸ್.ಎ.ಶೆಟವಣ್ಣವರ, ತಾಲೂಕಾಧ್ಯಕ್ಷ ಶೀವಾಜಿ ನರಸಾನಿ, ವಿಜಯಕುಮಾರ ಬೋಬಾಟಿ, ವಿಎಮ್ ಪಾಟೀಲ್, ಸಿದ್ದು ಶೆಟ್ಟಿ, ರಾಜು ಹಳದೂಕರ, ಮಾರುತಿ ಸಾಲ್ಗುಡಿ, ವಿಠ್ಠಲ ಗೌಡಾ, ಶಿವಾಜಿ ಕೊಲೆಕರ ಇದ್ದರು.
Leave a Comment