ಹೊನ್ನಾವರ. ಮಕ್ಕಳಲ್ಲಿರುವ ಅವ್ಯಕ್ತ ಸುಫ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ, ಭರವಸೆ, ದೃಢವಾದ ವ್ಯಕ್ತಿತ್ವ, ವಿಚಾರವಂತಿಕೆ ಕಲಾ ಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಕಲಾಶ್ರೀ ಆಯ್ಕೆ ಶಿಬಿರವು ಮಹತ್ವ ಪಡೆದುಕೊಂಡಿದೆ ಎಂದು ಯಕ್ಷಗಾನ ಕಲಾವಿದ ಗಣೇಶ ಭಂಡಾರಿ,ಕೆರಕೋಣ ಹೇಳಿದರು. ಅವರು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ, ಹೊನ್ನಾವರ ಆಶ್ರಯದಲ್ಲಿ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ, ಕೆರೆಕೋಣ್ನಲ್ಲಿ ತಾಲೂಕಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ಮೃದಂಗ ಭಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಭೆ, ಮಕ್ಕಳಲ್ಲಿ ಅಂತರ್ಗತವಾಗಿರುತ್ತದೆ ಆದರೆ ಅದಕ್ಕೆ ಸೂಕ್ತ ವೇದಿಕೆ ಸಿಕ್ಕಾಗ ಮಾತ್ರ ಅರಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಹೊನ್ನಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ತ್ರಿವೇಣಿ ಯಾಜಿ ಮಾತನಾಡಿ, ಮಕ್ಕಳು ದೇಶದ ಆಸ್ತಿ, ಅವರ ಸಾಮಥ್ರ್ಯಕ್ಕನುಗುಣವಾಗಿ ಪ್ರೋತ್ಸಾಹಿಸುವುದು ಇಲಾಖೆಯ ಜೊತೆಗೆ ಸಮಾಜದ ಜವಾಬ್ದಾರಿ ಕೂಡ ಇದೆ, ಆ ನಿಟ್ಟಿನಲ್ಲಿ ಕಲಾಶ್ರೀ ಶಿಬಿರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ ಮತ್ತು ದೇಶಕ್ಕೆ ಒಳ್ಳೆಯ ಮಕ್ಕಳನ್ನು ಕೊಡುಗೆ ನೀಡುವ ಕೆಲಸಕ್ಕೆ ಪುಷ್ಟಿ ನೀಡುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಜನ ಶಿಕ್ಷಣ ಸಂಸ್ಥಾನದ ರಮೇಶ ಭಂಡಾರಿ, ಕಾರವಾರ ಮಾತನಾಡಿ, ಸಾಂಸ್ಕøತಿಕ ಚಟುವಟಿಕೆ, ಸಮಾಜದಲ್ಲಿ ಸಾಮರಸ್ಯ ಹುಟ್ಟಿಸುವ ಕೆಲಸ ಮಾಡುತ್ತದೆ ಮಾತ್ರವಲ್ಲ ಮನೋ ವಿಕಾಸಕ್ಕೆ, ಚೈತನ್ಯಯುಕ್ತ ಬೆಳವಣಿಗೆಗೆ ಸಹಾಯಕವಾಗುತ್ತದೆÉ ಎಂದರು.
ವೇದಿಕೆಯ ಮೇಲೆ ಎಸ.ಕೆ.ಪಿ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಪ್ಪ, ಖ್ಯಾತ ಮೃದಂಗ ವಾದಕ ಗಜಾನನ ಭಂಡಾರಿ ಬೋಳ್ಗೆರೆ ಮತ್ತು ನಿವೃತ್ತ ಶಿಕ್ಷಕ ಬಿ.ವಿ.ಭಂಡಾರಿ ಉಪಸ್ಥಿತರಿದ್ದರು.
ತಾಲೂಕಾ ಮಟ್ಟದಿಂದ ಬೇರೆ ಬೇರೆ ವಿಭಾಗದಲ್ಲಿ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
ಮಹೇಶ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಎಮ್ ಎಸ್.ಶೆಟ್ಟಿ ವಂದಿಸಿದರು.
Leave a Comment