ಹೊನ್ನಾವರ;
.Àಕರ್ನಾಟಕ ಅರಣ್ಯ ಇಲಾಖೆ ಹೊನ್ನಾವರ ಇವರ ಆಶ್ರಯದಲ್ಲಿ ತಾಲೂಕಾ ಆಡಳಿತ. ಪಟ್ಟಣ ಪಂಚಾಯತ ಹೊನ್ನಾವರ. ಜಿಲ್ಲಾ ಪಂಚಾಯತ ಕಾರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾನೂನು ಸೇವಾ ಸಮಿತಿ, ವಕಿಲರ ಸಂಘ ಹಾಗೂ ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಹೊನ್ನಾವರ ದುರ್ಗಾಕೇರಿಯ ಸೆಂಟ್ ಥಾಮಸ್ ಮೈದಾನಲ್ಲಿ ಸಸಿ ನಡುವುದರ ಮೂಲಕ ಹೊನಾವರ ಸಿವಿಲ್ ಕೋರ್ಟ ಹಿರಿಯ ನ್ಯಾಯಾಧಿಸರಾದ ಚನ್ನಕೇಶವ ರೆಡ್ಡಿ ಪ್ಲಾಸ್ಟಿಕ್ ಮುಕ್ತ ಹೊನ್ನಾವರ ಜಾತಾ ಕಾರ್ಯಕ್ರಮಕ್ಕೆ ಹಸಿರು ನಿಸಾನೆ ತೋರಿಸಿ ಚಾಲನೆ ನೀಡಿದರು, ಟ್ಯಾಬ್ಲೋ ಮೂಲಕ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.ಪಟ್ಟಣದ ಪ್ರಮುಖ ಬೀದಿಯ ಮೂಲಕ ಅರಣ್ಯ ಇಲಾಖೆಗೆ ಆಗಮಿಸಿದರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಾಲೂಕಾÀ ಸಿವಿಲ್ ಕೋರ್ಟ ಹಿರಿಯ ನ್ಯಾಯಾದಿಸರಾದ ಚನ್ನಕೇಶವ ರೆಡ್ಡಿ ವಿಶ್ವ ಪರಿಸರ ದಿನಾಚರಣೆಯನ್ನು ಅರಣ್ಯ ಇಲಾಖೆಯವರು ವಿವಿದ ಸಂಘದವರ ಸಹಯೋಗದಲ್ಲಿ ನಡೆಸುತ್ತಿದ್ದಾರೆ ಪ್ಲಾಸ್ಟಿಕ್ನಿಂದಾಗುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳಿಂದ ಅರಿವು ಮೂಡಿಸುವ ಜಾಥವನ್ನು ಹಮ್ಮಿಕೋಂಡಿದ್ದಾರೆ ಪಟ್ಟಣದ ವಿವಿದ ಭಾಗಗಳಿಗೆ ಸಂಚರಿಸಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಕಾರ್ಯಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು,
ನಂತರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ ವಿ, ಮಾತನಾಡಿ ಪರಿಸರ ದಿನಾಚರಣೆಯ ಕಾರ್ಯಕ್ರಮದ ನಿಮಿತ ಹಮ್ಮಿಕೋಂಡಿರುವ ಕಾರ್ಯಕ್ರಮದ ಉದ್ದೇಶ ಹಾಗೂ ವಿವರ ನೀಡುತ್ತಾ,ಪ್ಲಾಸ್ಟಿಕ್ ನಿಷೇದದ ಕುರಿತು ಅರಿವು ಮೂಡಿಸುವುದು.ಇಂದಿನಿಂದ ಒಂದು ತಿಂಗಳ ಕಾಲ ವನಮಹೋತ್ಸವ ಕಾರ್ಯಕ್ರಮ ಪ್ರತಿ ಗ್ರಾಮ ಮಟ್ಟದಲ್ಲು ನಡೆಯುತ್ತದೆ ಎಂದರು.ಅರಣ್ಯಿಕರಣ ಪ್ರೋತ್ಸಾಹಕ್ಕಾಗಿ ರೈತರಿಗಾಗಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೀಯಾಯ್ತಿ ದರದಲ್ಲಿ ಅವರಿಗೆ ಬೇಕಾದ ಸಸಿಗಳನ್ನು ಅರ್ಜಿ ಸಲ್ಲಿಸಿದರೆ ನೀಡಲಾಗುವುದು,ಮೂರು ವರ್ಷಗಳಲ್ಲಿ ಗಿಡ ಬದುಕುಳಿದರೆ ಪ್ರತಿ ಗಿಡಕ್ಕೆ ನೂರು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಯೋಜನೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯಾದೀಶರಾದ ಮದುಕರ ಭಾಗ್ವತ, ತಾಲೂಕಾ ದಂಢಾದಿಕಾರಿ ಮಂಜುಳಾ ಭಜಂತ್ರಿ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನಂದೀಶ ಎಲ್, ವಲಯ ಅರಣ್ಯಾಧಿಕಾರಿ ರವೀಂದ್ರ ಪಿ ಸಿ, ಶಿಕ್ಷಣಾಧಿಕಾರಿ ಗೀರಿಶ ಪದಕಿ, ಮತ್ತಿತರರು ಉಪಸ್ಥಿತರಿದ್ದರು.
Leave a Comment