ಹೊನ್ನಾವರ .ದಿ 25 ಮೇ ರಿಂದ 29 ಮೇರವರೆಗೆ ಶ್ರೀಲಂಕಾದಲ್ಲಿ ನಡೆದ ಇಂಡೋ-ಶ್ರೀಲಂಕಾ ಚಾಂಪಿಯನ್ಶಿಪ್ನ ಅಥ್ಲೆಟಿಕ್ಸ ವಿಭಾಗದಲ್ಲಿ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ನ ಕ್ರೀಡಾಪಟುಗಳು ಭಾಗವಹಿಸಿ ಸ್ಪರ್ದೆಯಲ್ಲಿ ವಿಜೇತರಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಈ ಕ್ರೀಡಾಕೂಟದಲ್ಲಿ 14 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ ಓಟದ ಸ್ಪರ್ದೆಯಲ್ಲಿ ಸತ್ಯ ನಾರಾಯಣ ಮಾದೇವ ನಾಯ್ಕ ಈತನು ಕಂಚಿನ ಪದಕ ಗಳಿಸಿರುತ್ತಾರೆ. ಹಾಗೆ 17 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ ಓಟದ ಸ್ಪರ್ದೆಯಲ್ಲಿ ಮಣಿಕಂಠ ಹನುಮಂತ ಮುಕ್ರಿ ಈತನು ಬೆಳ್ಳಿಯ ಪದಕವನ್ನು ಗಳಿಸಿರುತ್ತಾರೆ. ಇವರಿಗೆ ಪದಕ ಟ್ರೋಪಿ ಹಾಗೂ ಪ್ರಶ್ಸ್ತಿ ಪತ್ರವನ್ನು ನಿಡಿ ಸಂಸ್ಥೆ ಪ್ರೋತ್ಸಾಹಿಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಅದ್ವೈತ ಸ್ಪೋಟ್ರ್ಸಕ್ಲಬ್ನ ಮುಖ್ಯ ತರಬೇತಿದಾರರಾದ ರಾಘವೇಂದ್ರ ಮೇಸ್ತರವರಿಗೆ ಉತ್ತಮ ತರಬೇತಿದಾರರು ಎಂದು ಗುರುತಿಸಿ ಕಚೇರಿ ಪ್ರಮಾಣ ಪತ್ರವನ್ನು ವಿತರಿಸಿ ಗೌರವಿಸಿದೆ. ಈ ಕ್ಲಬ್ನ ಸದಸ್ಯರು ಭಾರತವನ್ನು ಪ್ರತಿನಿಧಿಸಿ ವಿಜೇತರಾಗಿರುವುದು ಹೊನ್ನಾವರಕ್ಕೆ ಒಂದು ಮುಕುಟವಿದ್ದಂತೆ ಇವರ ಈ ಸಾಧನೆಗೆ ಹೊನ್ನಾವರದ ತಹಶೀಲ್ದಾರ ಮಂಜುಳಾ ಭಜಂತ್ರಿ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಗಿರೀಶ ಪದಕಿ ಕಾರ್ಯನಿರ್ವಾಹಕ ಅಧಿಕಾರಿಯಾದ ಆನಂದ ದೂರಿ ತಾಲೂಕು ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಯುವಜನ ಸೇವಾ ಅಧಿಕಾರಿಯಾದ ಸುದೀಶ ನಾಯ್ಕ ಮತ್ತು ತಾಲೂಕು ಯುವ ಕೂಟ ಅಧ್ಯಕ್ಷರಾದ ವಿನಾಯಕ ನಾಯ್ಕ ಮೂಡ್ಕಣಿ ಇವರು ಅಭಿನಂದಿಸಿದ್ದಾರೆ. ಮಕ್ಕಳ ಈ ಸಾಧನೆಗೆ ಅನುವು ಮಾಡಿಕೊಟ್ಟು ಪ್ರಾಯೋಜಕತ್ವವನ್ನು ವಹಿಸಿದ ಎಲ್ಲಾ ಪ್ರಾಯೋಜಕ ಇವರಿಗೆ ಅದ್ವೈತ ಸ್ಪೋಟ್ರ್ಸ ಕ್ಲಬ್ ತರಬೇತಿದಾರರು ಅಭಿನಂದಿಸಿದ್ದಾರೆ ,
Leave a Comment