ಹೊನ್ನಾವರ : ಮಂಕಿಯ ವನಸುಮ ಟ್ರಸ್ಟ್ ವತಿಯಿಂದ ಮಂಕಿ ಅಂಗನವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ ಕೈಗೊಳ್ಳಲಾಯಿತು. ಸಾರಸ್ವತಕೇರಿ ನಿವಾಸಿಗಳಾದ ವನಸುಮ ಟ್ರಸ್ಟ್ನ ಮುಖ್ಯಸ್ಥರಾದ ಸಂಜಯ್ ಕೌಶಿಕ್ ಹಾಗೂ ಸುಮಿತ್ರ ಕೌಶಿಕ್ ದಂಪತಿ ಉಚಿತವಾಗಿ ನೋಟ್ಬುಕ್ ವಿತರಿಸಿದರು. ಮಾಜಿ ಸೈನಿಕ ವಾಮನ ಎಸ್. ನಾಯ್ಕ ಅತಿಥಿಗಳಾಗಿ ಪಾಲ್ಗೊಂಡು ಗ್ರಾಮೀಣರ ಬದುಕಿಗೆ ಹೊಸ ಸ್ಪರ್ಶ ನೀಡುವಲ್ಲಿ ನೊಂದವರಿಗೆ ಸಹಾಯ ನೀಡುವಲ್ಲಿ ಕೌಶಿಕ್ ದಂಪತಿಗಳ ಸ್ಪಂದನೆಯನ್ನು ಶ್ಲಾಘಿಸಿದರು. ಗ್ರಾ.ಪಂ. ಅಧ್ಯಕ್ಷೆ ರೋಹಿಣಿ ಮೊಗೆರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನವೀನ್ ನಾಯ್ಕ ಇವರು ವನಸುಮ ಟ್ರಸ್ಟ್ನಿಂದ ನಡೆಸುತ್ತಿರುವ ಶೈಕ್ಷಣಿಕ ಸಹಕಾರವನ್ನು ಅಭಿನಂದಿಸಿದರು. ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕರು ಹಾಜರಿದ್ದರು. ಶಿಕ್ಷಕ ಗಜಾನನ ನಾಯ್ಕ ನಿರೂಪಿಸಿದರು.
Leave a Comment