ಹೊನ್ನಾವರ . ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸಾಹಿತ್ಯ, ಸಮಾಜಸೇವೆ, ಆರ್ಥಿಕ ಆರೋಗ್ಯ ಕೃಷಿ ಮತ್ತು ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆ ಮತ್ತು ಗ್ರಾಮೀಣಾಭಿವೃಧ್ಧಿ ಉದ್ದೇಶದೊಂದಿಗೆ ಹುಟ್ಟಿಕೊಂಡಿದ್ದ ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಇದರ ಅಡಿಯಲ್ಲಿ 6 ನೇ ವರ್ಷದ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ವಿನಾಯಕ ನಾಯ್ಕ ಮೂಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆ ಕೆಳಗಿನ ಮೂಡ್ಕಣಿಯಲ್ಲಿ ನೆರವೇರಿಸಿ ಮಾತನಾಡಿ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗದೇ ಮೌಲ್ಯಯುತ ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಬಿ.ಆರ್.ಸಿಯಾದ ಎಮ್. ಎನ್. ಗೌಡ ಮಾತನಾಡಿ ಹಣ ಇರುವವರು ತಮ್ಮಲ್ಲಿರುವ ಹಣವನ್ನು ಬೇಕಾದ ರೀತಿಯಲ್ಲಿ ಖರ್ಚು ಮಾಡುತ್ತಾರೆ ಆದರೆ ಅದು ಎಲ್ಲವೂ ಒಳ್ಳೆಯ ಕೆಲಸಗಳಿಗೆ ಸಲ್ಲುವುದಿಲ್ಲ. ಆದರೆ ವಿನಾಯಕ ನಾಯ್ಕ ರವರು ಸಂಪ್ರಭಾ ಗ್ರಾಮಿಣಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಕಳೆದ 6 ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ಬುಕ್ ವಿತರಿಸುತ್ತಾ ಬಂದಿದ್ದಾರೆ ಅವರ ಸೇವಾ ಮನೋಭಾವ ತುಂಬಾ ಶ್ಲಾಘನೀಯ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜು ಹಳ್ಳೇರ ಮಾತನಾಡಿ ನೂರು ದೇಗುಲ ಕಟ್ಟುವ ಬದಲು ಒಂದು ಶಾಲೆ ಕಟ್ಟು ಎನ್ನುವ ಹಿರಿಯರ ಮಾತಿನಂತೆ ಮನುಷ್ಯನ ಜೀವನದ ಮೂಲಭೂತ ಅವಷ್ಯಕತೆಗಳಲ್ಲಿ ಶಿಕ್ಷಣವೂ ಒಂದು ಅಂತಹ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೈಗೊಂಡ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸಿದರು. ಶಿಕ್ಷಕರಾದ ಜಿ.ಟಿ ನಾಯ್ಕ ಸ್ವಾಗತಿಸಿದರು. ಮುಖ್ಯೋಪಾದ್ಯಾಯರಾದ ಮಂಗಲಾ ಹೆಗಡೆ ವಂದಿಸಿದರು.
Leave a Comment