ಹಳಿಯಾಳ:
ರಂಜಾನ್ ಹಬ್ಬವೂ ಸಾಮರಸ್ಯದ ಪ್ರತೀಕ, ತ್ಯಾಗ ಮತ್ತು ಐಕ್ಯತಾ ಭಾವದ ಪ್ರತಿಬಿಂಬವಾಗಿದೆ ಎಂದು ಮೌಲಾನ ಮುಪ್ತಿ ಮುಸ್ತಾಕ ಹೇಳಿದರು. ಪಟ್ಟಣದ ವಿ.ವಿ.ಡಿಸ್ಕೂಲ ಆಫ್ಎಕ್ಸಲೆನ್ಸ ಶಾಲೆಯಲ್ಲಿ ರಂಜಾನ ಹಬ್ಬದ ಆಚರಣೆಯನ್ನು ವಿನೂತನ ಹಾಗೂ ವಿಶಿಷ್ಟವಾಗಿ ಆಚರಿಸಿದ್ದು ಇಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅವರು ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ರಂಜಾನ್ ಹಬ್ಬದ ಆಚರಣೆಯ ಮಹತ್ವ ಹಾಗೂ ವಿಶೇಷತೆಗಳ ಕುರಿತು ತಿಳಿಸಿ ನಿರಂತರವಾಗಿ 30 ದಿನಗಳ ಕಾಲ ಉಪವಾಸವಿದ್ದು ದೇವರ ಕೃಪೆಗೆ ಪಾತ್ರರಾಗುವ ಬಡವ ಬಲ್ಲೀದ ಎಂಬ ಬೇಧ ಭಾವವಿಲ್ಲದೆ ಸಂತಸದಿಂದ ರಂಜಾನ್ ಹಬ್ಬ ಆಚರಿಸಲಾಗುತ್ತದೆ ಎಂದರು. ಶಾಲೆಯ ಶಿಕ್ಷಕಿ ಸಂಗೀತಾ ಮೆಲಗಿರಿ, ವಿದ್ಯಾರ್ಥಿ ಪ್ರತಿನಿಧಿ ಸಮೀರ ಕಾಗದ, ಝಾಯನಾ ಶೇಠ ಹಾಗೂ ರುಶ್ಧಾ ತಿಗಡೊಳ್ಳಿ ಇದ್ದರು.
Leave a Comment