ಹೊನ್ನಾವರ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ “ಶಾಸಕರ ಕಛೇರಿ” ಶುಕ್ರವಾರ ಉದ್ಘಾಟಿಸಿದರು.
ಸಂಜೆ ಗೋಧೂಳಿ ಮೂಹೂರ್ತದಲ್ಲಿ ವೈದಿಕರಿಂದ ಗಣಪತಿ ಪೂಜೆ ನೇರವೆರಿಸಿ ನೂತನ ಕಛೇರಿ ಆರಂಭಗೊಳಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹೊನ್ನಾವರದ ಜನತೆ ನನ್ನನ್ನು ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಆರಿಸಿ ತಂದಿದ್ದಾರೆ. ವಾರದಲ್ಲಿ ಒಂದು ದಿನ ಶಾಸಕರ ಕಛೇರಿಯಲ್ಲಿ ಲಭ್ಯವಿದ್ದು ಜನರ ಸಮಸ್ಯೆಯನ್ನು ಆಲಿಸುತ್ತೇನೆ.ದಿನದ ಯಾವುದೇ ಸಮಯದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿದರು ನಿಮಗೆ ನಾನು ಲಭ್ಯವಿರುತ್ತೇನೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಲೊಕೇಶ ಮೇಸ್ತ, ಉಮೇಶ್ ನಾಯ್ಕ, ಎಮ್.ಎಸ್. ಹೆಗಡೆ ಕಣ್ಣಿಮನೆ, ಮಾಜಿ ಪ.ಪಂ ಅಧ್ಯಕ್ಷ ಸದಾನಂದ ಭಟ್ಟ, ಜಿ.ಕೆ.ಶೇಟ್ ಕರ್ಕಿ, ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ,ಸುಬ್ರಹ್ಮಣ್ಯ ಶಾಸ್ತ್ರಿ, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಯಶ್ವಂತ್ ಧುರಿ, ಅಕ್ಷರದಾಸೋಹ ಅಧಿಕಾರಿ ಸುರೇಶ್ ನಾಯ್ಕ, ಯುವಜನ ಸೇವಾ ಕ್ರೀಢಾದಿಕಾರಿ ಸುಧೀಶ್ ನಾಯ್ಕ, ಪ.ಪಂ ಸದಸ್ಯರಾದ ನಾಗೇಶ್ ಮೇಸ್ತ, ಸುರೇಶ್ ಶೇಟ್ ಉಪಸ್ಥಿತರಿದ್ದರು.
Leave a Comment