ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳದÀ ಬೆಳೆಗೆ ಅಲ್ಲಲ್ಲಿ ಎಲೆ ತಿನ್ನುವ ಹುಳದ ಬಾಧೆ ತಗಲಿದ್ದು ರೈತರು ಈ ಹುಳಬಾಧೆಯನ್ನು ಹತೋಟಿಗೆ ತರಲು ಕ್ಲೊರೋಫೈರಿಫಾಸ್ ಕೀಟನಾಶಕವನ್ನು ಸಿಂಪಡಿಸುವಂತೆ ಹಳಿಯಾಳ ಕೃಷಿ ಇಲಾಖೆ ರೈತರಿಗೆ ಸÀಲಹೆ ನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ತಾಲೂಕಿನ ಮುರ್ಕವಾಡ ಹೋಬಳಿಯ ಬಿ.ಕೆ.ಹಳ್ಳಿ, ತತ್ವಣಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಬೆಳೆಗೆ ಈ ಕೀಟ ಬಾಧೆ ತಗುಲಿದ್ದು, ಇನ್ನು ಉಳಿದ ಕ್ಷೇತ್ರಕ್ಕೂ ವಿಸ್ತರಿಸುವ ಸಂಭವ ಇದ್ದು ರೈತರು ಹತೋಟಿ ಕ್ರಮವಾಗಿ ಕ್ಲೊರೋಫೈರಿಫಾಸ್ ಕೀಟನಾಶಕವನ್ನು ಎರಡು ಎಮ್ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಅಲ್ಲದೆ ಪೂರಡಾನ ಹರಳನ್ನು ಸಹ ಉಪಯೋಗಿಸಬಹುದು. ಎಲೆಯ ಮೇಲೆ ಕಿಟವು ಪ್ಯೂಪಾ (ಕೋಶಾವಸ್ಥೆ) ಸ್ಥಿತಿಯಲ್ಲಿವುದರಿಂದ ಕೀಟನಾಶಕವನ್ನು ಹಾನಿಗೀಡಾದ ಭಾಗಕ್ಕೆ ತಗಲುವಂತೆ ಸಿಂಪರಣೆ ಮಾಡಬೇಕು. ನಂತರ ಪ್ಯೂಪಾದಿಂದ ಕೀಟವು ಹೊರಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುವ ಸಂಭವವಿರುತ್ತದೆ. ಹತ್ತಿರವಿರುವ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಕೀಟನಾಶಕವು ಲಭ್ಯವಿರುವುದರಿಂದ ರೈತರು ಇದರ ಲಾಭವನ್ನು ಪಡೆಯುವಂತೆ ಕೊರಲಾಗಿದೆ. ತಾಲೂಕಿನಲ್ಲಿ ಈ ಸಾಲಿನಲ್ಲಿ ರೈತರು ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬಿತ್ತನೆ ಮಾಢಿದ್ದು ಹದವರಿತ ಮಳೆ/ಹಂಗಾಮಿನ ಲಾಭವನ್ನು ಪಡೆದು ಬಿತ್ತನೆಯನ್ನು ಮಾಡಿದ್ದು ಬೆಳೆಯು ಈಗ 15-20 ದಿನದ ಅವಧಿಯದಿದ್ದು, ಬೆಳೆಯು ಚೆನ್ನಾಗಿದೆ ಕೇಲವೊಂದು ಭಾಗದಲ್ಲಿ ಮೆಕ್ಕೆಜೋಳದ ಬೆಳೆಯು ಕುಂಠಿತವಾಗಿರುವುದು ಕಂಡು ಬಂದಿದೆ ಎಂದಿರುವ ಇಲಾಖೆ ಮುಖ್ಯವಾಗಿ ಬಿ.ಕೆ.ಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಿಡದ ಮುಖ್ಯ ಎಲೆ (ಸುಳಿ) ಭಾಗವು ದುಂಡಾಕಾರವನ್ನು ಪಡೆದು ತುದಿಯಲ್ಲಿ ಎಲೆಗಳು ಹೊರ ಬರದÀ ಸ್ಥಿತಿ ಕಂಡು ಬಂದಿದೆ. ಇದು ಮುಖ್ಯವಾಗಿ ಮಣ್ಣಿನಲ್ಲಿ ಜಿಂಕ್ ಪೋಷಕಾಂಶ ಕೊರತೆಯಿರುವುದರಿಂದ ಈ ರೀತಿಯ ಲಕ್ಷಣಗಳು ಸಾಮಾನ್ಯವಾಗಿ ಕಂಡುಬಂದಿದೆ. ಇದು ಪ್ರಾರಂಭದ 30-35 ದಿನದ ವರೆಗೂ ಸಾಮಾನ್ಯವಾಗಿರುತ್ತದೆ. ನಂತರದ ದಿನದಲ್ಲಿ ಸರಿ ಹೋಗುತ್ತದೆ ಎಂದು ವಿವರಿಸಿರುವ ಅವರು ಬೆಳೆಯ ಬೇರುಗಳು ಪ್ರಾಥಮಿಕ ಹಂತದಲ್ಲಿ ಮಣ್ಣಿನಿಂದ ಜಿಂಕ್ ಸತ್ವವನ್ನು ಪಡೆಯಲು ಶಖ್ಯ ಆಗದೆ ಇರುವುದರಿಂದ, ರೈತರು ಜಿಂಕ್ ಸಲ್ಫೇಟನ್ನು ಸಿಂಪರಣೆಯ ಮೂಲಕ ಬೆಳೆಗೆ ನೀಡಲು ಸೂಚಿಸಿದ್ದಾರೆ. 5 ಗ್ರಾಮ ಜಿಂಕ್ ಸಲ್ಫೇಟನ್ನು ಪ್ರತಿ ಲೀಟರ್ ನೀರಿಗೆ 2.5 ಗ್ರಾಮ ಸುಣ್ಣದೊಂದಿಗೆ ಬೆರೆÉಸಿ ಸಿಂಪರಣೆ ಮಾಡಿ ಬೆಳೆಗೆ ಜಿಂಕ್ ಪೋಷಕಾಂಶ ಲಭ್ಯವಾಗಿ, ಬೆಳೆಯು ಸುಧಾರಣೆ ಹೊಂದುವುದು ಎಂದು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.
Leave a Comment