ಹೊನ್ನಾವರ: “ಪ್ರಧಾನಿ ನರೇಂದ್ರ ಮೋದಿ ಹವಾ, ಪಕ್ಷದ ಕಾರ್ಯಕರ್ತರ ಅವಿರತ ಶ್ರಮ, ದೇಶ ಭಕ್ತಿ, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ನಿಲುವು ಎಲ್ಲವು ಒಟ್ಟೂಗೂಡಿ ನನ್ನ ಗೆಲುವಾಗಿದೆ” ಎಂದು ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅಭಿಪ್ರಾಯಿಸಿದರು.
ಅವರು ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಇಡಗುಂಜಿ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಕಾರ್ಯಕರ್ತರು ಚುನಾವಣಾ ಪೂರ್ವದಲ್ಲಿ ನನ್ನ ಗೆಲುವಿಗಾಗಿ ಶ್ರೀಕ್ಷೇತ್ರದಲ್ಲಿ ಗಣಹೋಮ, ವಿನಾಯಕ ಶಾಂತಿ, ಸತ್ಯಗಣಪತಿ ಕಥೆ ಮಾಡಿಸುವುದಾಗಿ ಹರಕೆಹೊತ್ತಿದ್ದರು ಆ ಪ್ರಕಾರವಾಗಿ ಇಂದು ಪಕ್ಷದ ಕಾರ್ಯಕರ್ತ ಕೆ.ಪಿ.ಹೆಗಡೆ ನೇತ್ರತ್ವದಲ್ಲಿ ದೇವತಾಕಾರ್ಯಕ್ರಮದಲ್ಲಿ ಕುಟುಂಬ ಸಮೇತವಾಗಿ ಪಾಲ್ಗೊಂಡಿದ್ದೇನೆ 5 ವರ್ಷ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಶಕ್ತಿ ದೇವರು ನೀಡಲಿ ಎಂದು ಬೇಡಿಕೊಳ್ಳುತ್ತೆನೆ ಎಂದರು
ಜಿಲ್ಲೆಯಲ್ಲಿ ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ನನ್ನಷ್ಟು ಬಹುಮತ ಪಡೆದು ಗೆದ್ದವರಿಲ್ಲ, ಇದು ಪ್ರಾಮಾಣಿಕ ಕಾರ್ಯಕರ್ತರ ಗೆಲುವು, ಪಕ್ಷದ ಭಿನ್ನಾಭಿಪ್ರಾಯ, ಒಡಕುಗಳು ಯಾವುದು ಚುನಾವಣೆಯಲ್ಲಿ ಪ್ರಭಾವ ಬೀರಿಲ್ಲ ಎಂದರು.
ಚುನಾವಣಾ ಸಂಧರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ಯಾವ ರೀತಿ ಶಿಸ್ತು ಕ್ರಮ ಕೈಗೊಳ್ಳಲಿದ್ದಿರಿ ಎಂದು ಪ್ರಶ್ನಿಸಿದಾಗ ಉತ್ತರಿಸಿ ಹೈಕಮಾಂಡ್ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಕಾದು ನೋಡುತ್ತಿದ್ದೇನೆ ಎಂದರು.
Leave a Comment