ಹೊನ್ನಾವರ ,ಕೆಂಪೇ ಗೌಡ ಅವರ ಕೊಡುಗೆ ಮಾನವ ಕುಲಕ್ಕೆ ಆದರ್ಶ. ಅವರ ತತ್ವಾದರ್ಶ ಅಳವಡಿಸಿಕೊಂಡು ಮುಂದಿನ ಸಮಾಜಕ್ಕೆ ಕೊಡುಗೆ ನೀಡೋಣ ಆಮೂಲಕ ಅವರ ತತ್ವ ಸಿದ್ದಾಂತಗಳಿಗೆ ಗೌರವ ನೀಡೋಣ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಿ.ಎನ್. ಗೌಡ ಕೊಡಾಣಿ ಅಭಿಪ್ರಾಯಿಸಿದರು.
ಅವರು ಹೊನ್ನಾವರ ತಾಲೂಕಿನ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 527ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ ಕೆಂಪೆಗೌಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಆಗಮಿಸಿದ ಜಿ.ಎನ್ ಗೌಡ ಮಾತನಾಡಿ ಕೆಂಪೆಗೌಡ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ಬಣ್ಣಿಸಿದರು. ಅವರ ಹೋರಾಟದ ಫಲವಾಗಿ ಮುಂದಿನ ಭವಿಷ್ಯಕ್ಕೆ ಮಾದರಿಯಾಗಿದೆ. ರಾಷ್ಟ್ರಮಟ್ಟದಲ್ಲಿ ಅವರ ಹೆಸರು ಅವಿಸ್ಮರಣಿಯವಾಗಿದೆ ಎಂದು ನಾಡ ಪ್ರಭು ಕೆಂಪೆಗೌಡರ ಗುಣಗಾನ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿಯವರು ನಾಡ ಪ್ರಭು ಕೆಂಪೇಗೌಡ ಅವರು ಬೆಂಗಳೂರು ನಗರ ನಿರ್ಮಾಣಕ್ಕೆ ನೀಡಿರುವ ಕೊಡುಗೆಗಳ ಕುರಿತು ಸಂಕ್ಷಿಪ್ತವಾಗಿ ಇತಿಹಾಸ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಮಂಜುಳಾ ಭಜಂತ್ರಿ ಕೆಂಪೆ ಗೌಡ ಸಾಧನೆಗಳ ಕುರಿತು ಮಾತನಾಡುತ್ತಾ “ರಾಜರು ನಗರವನ್ನು ನಿರ್ಮಾಣ ಮಾಡುತ್ತಾರೆ ಅವರು ಆರ್ಥಿಕ ಸಬಲತೆ ಹೊಂದಿರುತ್ತಿದ್ದರು ಆದರೆ ಒರ್ವ ಪಾಳೆಗಾರ ಅಂದಿನ ಕಾಲ ಘಟ್ಟದಲ್ಲೇ ನಗರ ನಿರ್ಮಾಣ ಮಾಡಲು ಛಲ ತೊಟ್ಟಿದ್ದ ಎಕೈಕ ವ್ಯಕ್ತಿ ಎಂದರೆ ಕೆಂಪೆಗೌಡ. ಅವರ ಅವಧಿಯಲ್ಲಿ ದೇವಾಲಯ, ಕೆರೆಗಳು, ಸುಂದರ ಪರಿಸರ ನಿರ್ಮಾಣ ಮಾಡಿದವರು. ನಾವು ದೇವಾಲಯ,ಕೆರೆ ನಿರ್ಮಾಣ ಮಾಡದಿದ್ದರು ಸಹ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಿ ಆಮೂಲಕ ಅವರ ಆದರ್ಶಗಳನ್ನು ಪಾಲಿಸೋಣ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಚೆಲುವರಾಜ್, ಜೆಡಿಎಸ್ ತಾಲೂಕ ಅಧ್ಯಕ್ಷ ಸುಬ್ರಾಯ ಗೌಡ , ಎಸ್. ಜಿ. ಹೆಗಡೆ ನವಿಲಗೋಣ, ಸತೀಶ್ ಗೌಡ ಮಾವಿನಕುರ್ವಾ, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಯುವಜನ ಕ್ರೀಢಾಧಿಕಾರಿ ಸುಧೀಶ್ ನಾಯ್ಕ ಸ್ವಾಗತಿಸಿ,ವಂದಿಸಿದರು.
Leave a Comment