• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರಣ್ಯ ರಕ್ಷಣೆ ಜನರ ನಿತ್ಯ ಕಾಯಕವಾಗಲಿ:ಎಸಿಎಫ್ ನಂದೀಶ

July 9, 2018 by Gaju Gokarna Leave a Comment

ಹೊನ್ನಾವರ:”ಪರಿಸರದ ಮಡಿಲಲ್ಲೇ ಜನ್ಮತಳೆದು ಅದರ ಪ್ರಾಣವಾಯು ಸೇವಿಸಿ ಬದುಕುತ್ತಿರುವ ಮನುಷ್ಯನಿಗೆ ಪರಿಸರದ ಮಹತ್ವದ ಕುರಿತು ಪಾಠ ಮಾಡಬೇಕಾದ ಪ್ರಮೇಯ ಬಂದಿರುವುದು ಒಂದು ವಿಪರ್ಯಾಸದ ಸಂಗತಿ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್.ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆ,ಕಾಮಕೋಡ ಪರಿಸರ ಕೂಟ ಹಾಗೂ ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಮಕೋಡ ದೇವರಕಾಡಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಹಿಂದಿನ ಕಾಲದಲ್ಲಿ ಅರಣ್ಯ ಹಾಗೂ ಜನರ ನಡುವೆ ಇದ್ದಿದ್ದ ಅವಿನಾಭಾವ ಸಂಬಂಧ ಕಾಲಕ್ರಮಣೇಣ ಮರೆಯಾಗುತ್ತ ಬಂದು ಅರಣ್ಯ ರಕ್ಷಣೆಯ ಬಗ್ಗೆ ಜನರಿಗೆ ತಿಳಿಹೇಳುವ ಕಾಲ ಬಂದಿತು.1959ರಲ್ಲಿ ಅಂದಿನ ಆಹಾರ ಸಚಿವರಾಗಿದ್ದ ಕೆ.ಎಂ.ಮುನ್ಶಿ ಪ್ರತಿವರ್ಷ ದೇಶದೆಲ್ಲೆಡೆ ವನಮಹೋತ್ಸವ ಆಚರಿಸಲು ಕರೆ ನೀಡಿದರು.ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಈ ಭೂಮಿಯಲ್ಲಿ ಜೀವಿಗಳಿಗೆ ಉಳಿಗಾಲವಿಲ್ಲ.ಪರಿಸರ,ಅರಣ್ಯ ರಕ್ಷಣೆಯ ಮಹತ್ವ ಜನರ ಪ್ರಜ್ಞೆಯ ಭಾಗವಾಗಿ ಇದು ನಮ್ಮ ನಿತ್ಯದ ಕಾಯಕವಾಗಬೇಕಿದೆ.ವನಮಹೋತ್ಸವ ಒಂದು ದಿನಕ್ಕೆ ಸೀಮಿತವಾಗದೆ ಇದು ನಿತ್ಯೋತ್ಸವವಾಗಲಿ’ ಎಂದು ಅವರು ಆಶಿಸಿದರು.
“ಕಾಮಕೋಡ ದೇವರ ಕಾಡಿನ ಸಂರಕ್ಷಣೆ ಹಾಗೂ ಇಲ್ಲಿನ ಕೆರೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.
ಶಿಕ್ಷಕ ವಿಷ್ಣು ನಾಯ್ಕ ಮಾತನಾಡಿ,”ಕಾಮಕೋಡ ಅರಣ್ಯವನ್ನು ದೇವರಕಾಡು ಎಂದು ಸಂರಕ್ಷಣೆ ಮಾಡುತ್ತಿರುವುದರಿಂದ ಇಲ್ಲಿನ ಸಸ್ಯ ಸಂಪತ್ತು ಸಮೃದ್ಧವಾಗಿ ಬೆಳೆದಿದ್ದು ಜನರ ನೆಮ್ಮದಿಯ ತಾಣವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಫಾರೆಸ್ಟರ್ ವಿನೋದ ಗೌಡ,ಗಂಗಾಧರ ನಾಯ್ಕ ಬೇಣ್ಮನೆ ಉಪಸ್ಥಿತರಿದ್ದರು.ಪ್ರೊ.ಎಂ.ಜಿ.ಹೆಗಡೆ ವಂದಿಸಿದರು.ಎಚ್.ಎಲ್.ಗುರುದತ್ತ,ಎಚ್.ಎಸ್.ಪ್ರಭಾಕರಮೂರ್ತಿ,ಅರಣ್ಯ ಇಲಾಖೆಯ ಬಸವನ ಗೌಡ,ಗಣೇಶ ನಾಯ್ಕ,ಶ್ರೀಧರ ಭಟ್ಟ ಮತ್ತಿತರರು ಸಹಕರಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಅರಣ್ಯ ಇಲಾಖೆ, ಅರಣ್ಯ ರಕ್ಷಣೆ ಜನರ ನಿತ್ಯ ಕಾಯಕವಾಗಲಿ, ಅರಣ್ಯ ರಕ್ಷಣೆಯ ಮಹತ್ವ ಜನರ ಪ್ರಜ್ಞೆಯ, ಎಸಿಎಫ್ ನಂದೀಶ, ಕಾಮಕೋಡ ಅರಣ್ಯ, ಕಾಮಕೋಡ ದೇವರಕಾಡಿನಲ್ಲಿ, ಕಾಮಕೋಡ ಪರಿಸರ ಕೂಟ, ಕಾಲಕ್ರಮಣೇಣ, ಕೆರೆ ಅಭಿವೃದ್ಧಿಗೆ ಅರಣ್ಯ ಇಲಾಖೆ, ಜನರ ನೆಮ್ಮದಿಯ ತಾಣ, ದೇವರಕಾಡು, ಪರಿಸರ, ಪರಿಸರದ ಮಡಿಲಲ್ಲೇ ಜನ್ಮತಳೆದು, ಪ್ರಾಣವಾಯು ಸೇವಿಸಿ, ಬದುಕುತ್ತಿರುವ ಮನುಷ್ಯ, ವನಮಹೋತ್ಸವ, ಸಂರಕ್ಷಣೆ, ಸಸ್ಯ ಸಂಪತ್ತು ಸಮೃದ್ಧವಾಗಿ ಬೆಳೆದಿದ್ದು, ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar