ಹೊನ್ನಾವರ : ಕಡತೋಕ ಗ್ರಾಮದ ಹೆಬ್ಳೆಕೊಪ್ಪದ ಸುಧಾಕರ ದೇಶಭಂಡಾರಿ(50) ಎಂಬುವರ ಮೃತದೇಹ ಸಮೀಪದ ಬಡಗಣಿ ನದಿಯಲ್ಲಿ ಪತ್ತೆಯಾಗಿದೆ. `ಕೂಲಿ ಕೆಲಸ ಮಾಡುತ್ತಿದ್ದ ಸುಧಾಕರ ಕಳೆದ 3 ದಿನಗಳ ಹಿಂದೆ ಬಡಗಣಿ ನದಿ ದಾಟುತ್ತಿದ್ದಾಗ ಪ್ರ ವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದರು. ಅವರ ದೇಹ ಭಾನುವಾರ ಬೆಳಿಗ್ಗೆ ಸಿಕ್ಕಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
Leave a Comment