ಹಳಿಯಾಳ:- ಜೀವನೊಪಾಯಕ್ಕಾಗಿ ದಶಕಗಳಿಂದ ಅರಣ್ಯ ಅತೀಕ್ರಮಣ ಮಾಡಿ ಸಾಗುವಳಿ ಮಾಡುತ್ತ ಬಂದಿರುವ ಜಮೀನುಗಳಿಗೆ ಪಟ್ಟಾ-ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12 ರಂದು ಜಿಲ್ಲಾಧಿಕಾರಿಗಳ ಬಳಿ ದಲಿತ ಸಂಘರ್ಷ ಸಮೀತಿ (ಕೆಂಪು ಸೇನೆ) ಸಂಘಟನೆ ನಿಯೋಗ ತೆರಳುತ್ತಿದೆ ಎಂದು ಸಂಘಟನೆಯ ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷ ವಿ. ಬಿ ರಾಮಚಂದ್ರ ತಿಳಿಸಿದ್ದಾರೆ.
ಮಂಗಳವಾರ ಪಟ್ಟಣದ ಪುರಸಭಾ ಸಭಾ ಭವನದಲ್ಲಿ ನಡೆದ ಅರಣ್ಯ ಅತೀಕ್ರಮನ ಸಾಗುವಳಿದಾರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಸುಮಾರು 30ಕ್ಕೂ ಅಧಿಕ ರೈತರನ್ನೊಳಗೊಂಡ ಸಂಘಟನೆಯ ನಿಯೋಗ ಜಿಲ್ಲಾಧಿಕಾರಿಗಳಿಗೆ ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಶಿವಾಜಿ ಮಂಗೇಶಕರ, ಸತಾರ ಬೇಟಗೇರಿ, ಮುಕುಂದ ಕಿನಗೇಕರ, ರಾಜು ಕುರುಬರ, ಮಂಜುಳಾ ವಡ್ಡರ, ಆನಂದ ಮುಗುದ ಇತರರು ಇದ್ದರು.
Leave a Comment