• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಪೋಲಿಸರ ಕಾರ್ಯಾಚರಣೆ ನಾಲ್ವರು ಅಂತರರಾಜ್ಯ ಖತರನಾಕ್ ಕಳ್ಳರ ಬಂಧನ ಬಂಧಿತರು ಮಧ್ಯಪ್ರದೇಶ ಮೂಲದವರು- ರಾಜ್ಯದ ವಿವಿಧೆಡೆ 70 ಕ್ಕೂ ಹೆಚ್ಚು ಕಳ್ಳತನ, ದರೊಡೆಗಳಲ್ಲಿ ಭಾಗಿ ?ಶಂಕೆ

July 14, 2018 by Yogaraj SK Leave a Comment

ಹಳಿಯಾಳ: ಇತ್ತೀಚೆಗೆ ಪಟ್ಟಣದ ಹಲವು ಕಡೆ  ಹಲ್ಲೆ ನಡೆಸಿ ಕಳ್ಳತನ, ದರೋಡೆ ಮಾಡಿ ಪರಾರಿಯಾಗಿದ್ದ ಅಂತರರಾಜ್ಯ ಕುಖ್ಯಾತ ಕಳ್ಳರ ತಂಡದ ನಾಲ್ವರನ್ನು ಬಂಧಿಸಿ ಕಳ್ಳತನಕ್ಕೆ ಬಳಸಿದ ಸಲಕರಣೆಗಳನ್ನು, ಮೊಬೈಲ ಪೋನ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಉತ್ತರ ಕನ್ನಡ ಜಿಲ್ಲೆಯ  ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ.  ಕಳೆದ 15 ದಿನಗಳ ಹಿಂದೆ ಹಲ್ಲೆ ನಡೆಸಿ ದರೊಡೆ ಮಾಡಿದ ಪ್ರಕರಣದಿಂದ ತಾಲೂಕಿನ ಸಾರ್ವಜನಿಕರಲ್ಲಿ ಆತಂಕ, ಭಯ ಹುಟ್ಟಿಕೊಂಡಿತ್ತು ಈ ಪ್ರಕರಣವು ಪೋಲಿಸ್ ಇಲಾಖೆಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಸಣ್ಣ ಸುಳಿವು ಬಿಡದೆ ಅತ್ಯಂತ ಚಾಣಾಕ್ಷತನದಿಂದ ಕಳ್ಳತನ ನಡೆಸಿ ಪರಾರಿಯಾಗಿದ್ದ ತಂಡ ಮತ್ತೆ ಹಳಿಯಾಳಕ್ಕೆ ದರೊಡೆ ಮಾಡಲು ಸಂಚು ರೂಪಿಸಿದ ಬಗ್ಗೆ ಕೆಲವರ ಮಾಹಿತಿ ಮೇರೆಗೆ  ಚಾಣಾಕ್ಷತನದಿಂದ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದ ತಂಡ ಕೊನೆಗೂ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.  ಪೋಲಿಸ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಡಿ.ವೈ.ಎಸ್ಪಿ ಮೋಹನ ಪ್ರಸಾದ ರವರ ಮಾರ್ಗದರ್ಶನದಲ್ಲಿ ಪೋಲಿಸ ಕಾರ್ಯಾಚರಣೆಯಲ್ಲಿ ತಾಲೂಕಿನ ಅಜಗಾಂವ ಗ್ರಾಮದ ಹೊಲವೊಂದರಲ್ಲಿ ಅವಿತುಕುಳಿತಿದ್ದ ಈ ಕಳ್ಳರನ್ನು ಗ್ರಾಮಸ್ಥರ ಸಹಾಯದಿಂದ ಬಂಧಿಸಲಾಗಿದೆ.  ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬಟ ತಾಲೂಕಿನ ಬಡಿಹುತ್ತಿ ಗ್ರಾಮದ ಬಹದ್ದೂರ ಸಿಂಗ್ ರಾಯ್‍ಚಂದ್ ಬಿಲ್ವಾಲ (26), ಸುರಂ ಕಾಲಿಯಾ ಮಿನಾವಟ್ (30), ಚೋಡಿಗುತಿ ಗ್ರಾಮದ ಇಗ್ರಾಂ ಪಾನ್‍ಸಿಂಗ್ ಅಜನರ್ (25), ಬೋರಿ ತಾಲೂಕಿನ ಪುನತಲವ್ ಗ್ರಾಮದ ಸುರಬ್ ದೋಲು ಬುರಿಯಾ (22) ಈ ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   ಪಟ್ಟಣದ ಕೆಲವು ಕಡೆ ಇತ್ತಿಚಿಗೆ ಕಳ್ಳತನ, ದರೋಡೆ, ಹಲ್ಲೆ ನಡೆಸಿದ ಘಟನೆ:- ಜೂನ 11ರಂದು ಮಧ್ಯರಾತ್ರಿ 3.15 ರ ಸುಮಾರು ಪಟ್ಟಣದ ಆನೆಗುಂದಿ ಬಡಾವಣೆಯಲ್ಲಿ ಎಲ್.ಐ.ಸಿ ಅಧಿಕಾರಿ ಮಂಜುನಾಥ ಶಾಸ್ತ್ರಿ ಅವರ ಮನೆಯ ಮುಂಬಾಗಿಲಿನ ಇಂಟರಲಾಕ್ ಮುರಿದು ಗಂಡ ಹೆಂಡತಿ ಮಕ್ಕಳನ್ನು ಬೆದರಿಸಿದಾಗ ಶಾಸ್ತ್ರಿಯವರು ಪ್ರತಿರೋದಿಸಿದಾಗ ಅವರ ತಲೆಗೆ ಕಟ್ಟಿಗೆಯಿಂದ ಹೊಡೆದು ಒತ್ತಾಯ ಪೂರ್ವಕವಾಗಿ ಕಪಾಟಿನ ಕೀಲಿ ಕೈ ಕಿತ್ತುಕೊಂಡು 177ಗ್ರಾಂ ಬಂಗಾರದ ಆಭರಣ ಮತ್ತು  80 ಗ್ರಾಂ ಬೆಳ್ಳಿ ಆಭರಣ 1200 ನಗದು ತೆಗೆದುಕೊಂಡು 2 ಮೊಬೈಲ್‍ಗಳನ್ನು ಕಿತ್ತುಕೊಂಡು ಶಾಸ್ತ್ರಿಯವರ ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದರು.  ಸಣ್ಣ ನೀರಾವರಿ ಇಲಾಖೆ ಅಟೆಂಡರ್ ಮನೆಯನ್ನು ಒಡೆದು ಕಪಾಟಿನಲ್ಲಿದ್ದ 20 ಗ್ರಾಂ ಬಂಗಾರದ ಆಭರಣ, 400 ಗ್ರಾಂ ಬೆಳ್ಳಿ ದೀಪ ಮತ್ತು 20 ಸಾವಿರ ನಗದು ಕದ್ದಿದ್ದರು. ಜುಲೈ 6ರಂದು ಮಧ್ಯರಾತ್ರಿ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ನೋಡಿ ಕೂಗಾಡಿದ ವೃದ್ದನ ತಲೆಗೆ ಕಲ್ಲಿನಿಂದ ಹೊಡೆದು ಓಡಿಹೋಗುತ್ತಿದ್ದಾಗ ಕರ್ತವ್ಯದ ಮೇಲಿದ್ದ ಪೋಲಿಸ ಸಿಬ್ಬಂದಿ ಅಶೋಕ ಅವರ ಮೇಲೂ ಈ ಕಳ್ಳರ ತಂಡ ಹಲ್ಲೆ ನಡೆಸಿತ್ತು ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ:- ಹಳಿಯಾಳ ಸಿ.ಪಿ.ಐ ಸುಂದ್ರೇಶ ಹೊಳೆಣ್ಣವರ, ಪಿ.ಎಸ್.ಐ ಆನಂದ ಮೂರ್ತಿ.ಸಿ., ಪಿ.ಎಸ್.ಐ ಪುಟ್ಟೇಗೌಡಾ ಎಸ್.ಎನ್., ಎ.ಎಸ್.ಐ ರವರಾದ ಎ.ಡಿ.ಪಾವಸ್ಕರ, ಪರಮೇಶ್ವರಪ್ಪಾ ಶೇಟ್‍ಸನಧಿ, ಬಿ.ವಿ.ಹೆಗಡೆ, ಮುಳೆ, ಪಾಠನಕರ, ಹಾಗೂ ಸಿಬ್ಬಂದಿಯವರಾದ ಅಶೋಕ ಹುಬ್ಬಳ್ಳಿ, ಪಿ.ಎಮ್.ಸೋಲ್ಲಾಪೂರಿ, ಗೋವಿಂದ ಉಪ್ಪಾರ, ಬಸವರಾಜ ವಾಲಿಶೆಟ್ಟರ, ಸಂಜು ಅಣ್ಣಿಕೇರಿ, ಜಗದೀಶ ಕುಂಬಾರ, ನಿಂಗಪ್ಪಾ ಬಳ್ಳಾರಿ, ನಿಂಗಪ್ಪಾ ಕುಂಟಿಮೆಂಟಿ, ಶ್ರೀಶೈಲ ಮಂಗಾನವರ, ಅರವಿಂದ ಭಜಂತ್ರಿ ಹಾಗೂ ಗೃಹ ರಕ್ಷಕ ಸಿಬ್ಬಂದಿ ರವಿ ಇತರರು ಭಾಗವಹಿಸಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 177ಗ್ರಾಂ ಬಂಗಾರದ ಆಭರಣ, 6ರಂದು ಮಧ್ಯರಾತ್ರಿ ಅರಣ್ಯ ಇಲಾಖೆಯ ವಸತಿ ಗೃಹದ, 80 ಗ್ರಾಂ ಬೆಳ್ಳಿ ಆಭರಣ 1200, antar rajya kallara bandhana, ಅಜಗಾಂವ ಗ್ರಾಮದ ಹೊಲವೊಂದರಲ್ಲಿ ಅವಿತುಕುಳಿತಿದ್ದ, ಅಂತರರಾಜ್ಯ ಖತರನಾಕ್ ಕಳ್ಳರ ಬಂಧನ, ಅತ್ಯಂತ ಚಾಣಾಕ್ಷತನದಿಂದ ಕಳ್ಳತನ, ಅರವಿಂದ ಭಜಂತ್ರಿ, ಎ.ಎಸ್.ಐ ರವರಾದ ಎ.ಡಿ.ಪಾವಸ್ಕರ, ಎಲ್.ಐ.ಸಿ ಅಧಿಕಾರಿ ಮಂಜುನಾಥ ಶಾಸ್ತ್ರಿ, ಒತ್ತಾಯ ಪೂರ್ವಕವಾಗಿ ಕಪಾಟಿನ, ಕಡೆ ಇತ್ತಿಚಿಗೆ ಕಳ್ಳತನ, ಕಳ್ಳತನಕ್ಕೆ ಬಳಸಿದ ಸಲಕರಣೆ, ಕೀಲಿ ಕೈ ಕಿತ್ತುಕೊಂಡು, ಗೃಹ ರಕ್ಷಕ, ಗೋವಿಂದ ಉಪ್ಪಾರ, ಜಗದೀಶ ಕುಂಬಾರ, ಡಿ.ವೈ.ಎಸ್ಪಿ ಮೋಹನ ಪ್ರಸಾದ, ತಲೆಗೆ ಕಟ್ಟಿಗೆಯಿಂದ ಹೊಡೆದು, ದರೊಡೆಗಳಲ್ಲಿ ಭಾಗಿ, ದರೋಡೆ, ದರೋಡೆ ಮಾಡಿ ಪರಾರಿ, ನಗದು ತೆಗೆದುಕೊಂಡು 2 ಮೊಬೈಲ್‍, ನಾಲ್ವರು, ನಿಂಗಪ್ಪಾ ಕುಂಟಿಮೆಂಟಿ, ನಿಂಗಪ್ಪಾ ಬಳ್ಳಾರಿ, ಪಟ್ಟಣದ ಹಲವು ಕಡೆ  ಹಲ್ಲೆ ನಡೆಸಿ ಕಳ್ಳತನ, ಪರಮೇಶ್ವರಪ್ಪಾ ಶೇಟ್‍ಸನಧಿ, ಪಾಠನಕರ, ಪಿ.ಎಮ್.ಸೋಲ್ಲಾಪೂರಿ, ಪಿ.ಎಸ್.ಐ ಆನಂದ ಮೂರ್ತಿ.ಸಿ., ಪಿ.ಎಸ್.ಐ ಪುಟ್ಟೇಗೌಡಾ ಎಸ್.ಎನ್., ಪೋಲಿಸ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಪೋಲಿಸ್ ಇಲಾಖೆಗೆ ಬಿಸಿ ತುಪ್ಪ, ಬಂಧಿತರು ಮಧ್ಯಪ್ರದೇಶ ಮೂಲದವರು, ಬಸವರಾಜ ವಾಲಿಶೆಟ್ಟರ, ಬಿ.ವಿ.ಹೆಗಡೆ, ಭಯ, ಮುಳೆ, ಮೊಬೈಲ ಪೋನ್‍ಗಳನ್ನು ವಶ, ರಾಜ್ಯದ ವಿವಿಧೆಡೆ 70 ಕ್ಕೂ ಹೆಚ್ಚು ಕಳ್ಳತನ, ವೃದ್ದನ ತಲೆಗೆ ಕಲ್ಲಿನಿಂದ ಹೊಡೆದು, ಶಂಕೆ, ಶಾಸ್ತ್ರಿಯವರ ದ್ವಿಚಕ್ರ ವಾಹನ, ಶ್ರೀಶೈಲ ಮಂಗಾನವರ, ಸಂಜು ಅಣ್ಣಿಕೇರಿ, ಸಾರ್ವಜನಿಕರಲ್ಲಿ ಆತಂಕ, ಸಿ.ಪಿ.ಐ ಸುಂದ್ರೇಶ ಹೊಳೆಣ್ಣವರ, ಹಲ್ಲೆ, ಹಳಿಯಾಳ ಪೋಲಿಸರ ಕಾರ್ಯಾಚರಣೆ, ಹಾಗೂ ಸಿಬ್ಬಂದಿಯವರಾದ ಅಶೋಕ ಹುಬ್ಬಳ್ಳಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar