ಹಳಿಯಾಳ:- ಟಾಟಾ ಎಸ್ ಗೂಡ್ಸ್ ರೀಕ್ಷಾವೊಂದು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನನ್ನು ಮಹಾರಾಷ್ಟ್ರದ ಭೀಡ ಪ್ರದೇಶದ ಪಾಂಡುರಂಗ ಮಾನೆ (35) ಎಂದು ಗುರುತಿಸಲಾಗಿದ್ದು. ಇತನು ಕಬ್ಬು ಕಟಾವು ಕೆಲಸಕ್ಕೆ ಹಳಿಯಾಳಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ತೆಗ್ನಳ್ಳಿ ಗ್ರಾಮ ಸಮೀಪ ಘಟನೆ ನಡೆದಿದ್ದು. ಟಾಟಾ ಎಸ್ ವಾಹನ ಬೈಕ್ಗೆ … [Read more...] about ಗೂಡ್ಸ್ ರಿಕ್ಷಾ ಹಿಟ್ ಎಂಡ್ ರನ್ ಬೈಕ್ ಸವಾರ ಸಾವು – ಹಳಿಯಾಳ ಪೋಲಿಸರ ಕಾರ್ಯಾಚರಣೆ ಅಪಘಾತಪಡಿಸಿದ ಆರೋಪಿ ಸಹಿತ ವಾಹನ ಅಂದರ್
ಹಳಿಯಾಳ ಪೋಲಿಸರ ಕಾರ್ಯಾಚರಣೆ
ಹಳಿಯಾಳ ಪೋಲಿಸರ ಕಾರ್ಯಾಚರಣೆ ಮೂವರು ಅಂತರ ಜಿಲ್ಲಾ ಕಳ್ಳರು ಮಾಲು ಸಮೇತ ಅಂದರ್ – ಜನರಿಂದ ಪ್ರಶಂಸೆ
ಹಳಿಯಾಳ:- ಮೂವರು ಅಂತರ ಜಿಲ್ಲಾ ಕಳ್ಳರನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು ಪೋಲಿಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಆದೇಶದಂತೆ ಎಡಿಷನ್ ಎಸ್ಪಿ ಗೋಪಾಲ ಬ್ಯಾಕೋಡ ಹಾಗೂ ದಾಂಡೇಲಿ ಡಿವೈಎಸ್ಪಿ ಪಿ.ಮೋಹನ ಪ್ರಸಾದ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಬಿ.ಎಸ್.ಲೋಕಾಪುರ ಹಾಗೂ ಪಿ.ಎಸ್.ಐ ಆನಂದಮೂರ್ತಿ.ಸಿ. ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಮೂವರು ಅಂತರ ಜಿಲ್ಲಾ ಕಳ್ಳರು ಮಾಲು ಸಮೇತ ಅಂದರ್ – ಜನರಿಂದ ಪ್ರಶಂಸೆ
ಹಳಿಯಾಳ ಮೊಬೈಲ್ ಅಂಗಡಿಯಲ್ಲಿ ಮಟ್ಕಾ(ಓಸಿ) ಹಳಿಯಾಳ ಪೋಲಿಸರ ಕಾರ್ಯಾಚರಣೆ ಮಾಲಕ ವಿಜಯ ಅರೆಸ್ಟ್
ಹಳಿಯಾಳ: ಸೋಮವಾರ ಸಾಯಂಕಾಲ ಹಳಿಯಾಳ ಪೋಲಿಸರು ನಡೆಸಿದ ಕ್ಷೀಪ್ರ ಕಾರ್ಯಾಚರಣೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಮಟಕಾ(ಓಸಿ) ನಡೆಸುತ್ತಿದ್ದವನನ್ನು ಸೇರಿದಂತೆ ಇನ್ನಿಬ್ಬರು ಓಸಿ ಬರೆಯುತ್ತಿದ್ದವರನ್ನು ಬಂಧಿಸಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಳಿಯಾಳದ ಮಾರುಕಟ್ಟೆ ಪ್ರದೇಶದ ಮೊತಿಕೆರೆ ಸನಿಹದಲ್ಲಿರುವ ವಿಜಯ ಮೊಬೈಲ್ ಶಾಪ್ನಲ್ಲಿ ಕ್ರೀಕೆಟ್ ಬೆಟ್ಟಿಂಗ್, ಬಡ್ಡಿ ವ್ಯವಹಾರ ಹಾಗೂ ಓಸಿ ನಡೆಸಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ ಮತ್ತು … [Read more...] about ಹಳಿಯಾಳ ಮೊಬೈಲ್ ಅಂಗಡಿಯಲ್ಲಿ ಮಟ್ಕಾ(ಓಸಿ) ಹಳಿಯಾಳ ಪೋಲಿಸರ ಕಾರ್ಯಾಚರಣೆ ಮಾಲಕ ವಿಜಯ ಅರೆಸ್ಟ್
ಹಳಿಯಾಳ ಪೋಲಿಸರ ಕಾರ್ಯಾಚರಣೆ ಒಂಟಿ ಮಹಿಳೆಯರ ಸರ, ಚಿನ್ನ ಕದಿಯುತ್ತಿದ್ದ ಯುವಕನ ಬಂಧನ
ಹಳಿಯಾಳ : ಜನ ಸಂಚಾರವಿಲ್ಲದ ಪ್ರದೇಶಗಳಲ್ಲಿ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ ಅವರನ್ನು ಹಿಂಬಾಲಿಸಿ ಅವರಿಗೆ ಚಾಕು ತೋರಿಸಿ, ಅವರು ಧರಿಸುತ್ತಿದ್ದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಓರ್ವ ಯುವಕನನ್ನು ಹಳಿಯಾಳ ಪೋಲಿಸರು ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ನ್ನು ವಶಕ್ಕೆ ಪಡೆದಿದ್ದಾರೆ. ನೆರೆಯ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅರೇಬಸವನಕೊಪ್ಪ ಗ್ರಾಮದ ಗಾರೆ ಕೆಲಸ ಮಾಡುತ್ತಿದ್ದ ಯುವಕ ಸುನೀಲ್ ವಿಠ್ಠಲ್ ದುಂಡಸಿ … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಒಂಟಿ ಮಹಿಳೆಯರ ಸರ, ಚಿನ್ನ ಕದಿಯುತ್ತಿದ್ದ ಯುವಕನ ಬಂಧನ
ಹಳಿಯಾಳ ಪೋಲಿಸರ ಕಾರ್ಯಾಚರಣೆ ಪಟ್ಟಣದಲ್ಲಿ ಕಳುವಾಗಿದ್ದ ಕಾರು ಮುಂಬಯಿಯಲ್ಲಿ ಪತ್ತೆ ಆರೋಪಿ ಬಂಧನ
ಹಳಿಯಾಳ:- ಪಟ್ಟಣದ ಬಾಬುರಾವ ಹೋಟೆಲ್ ಮುಂದೆ ನಿಲ್ಲಿಸಿದ ಸಂದರ್ಭದಲ್ಲಿ ಕಳುವಾಗಿದ್ದ 20 ಲಕ್ಷ ರೂ. ಬೆಲೆ ಬಾಳುವ ಇನೋವಾ ಕ್ರಿಸ್ಟಾ ಕಾರು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು ಇನ್ನಿಬ್ಬರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಕಾರು ಕದ್ದ ಆರೋಪಿಯನ್ನು ಜಾವೇದ ರುಕಮುದ್ದಿನ್ ಶೇಖ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪರಾರಿಯಾದ ಇನ್ನಿಬ್ಬರು ಆರೋಪಿಗಳಾದ ಗುಲ್ಬರ್ಗದ ಆವೇಜ್ ಹಾಗೂ ಸೈಪ್ನ ಶೋಧ ಕಾರ್ಯಕ್ಕೆ ವ್ಯಾಪಕ … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಪಟ್ಟಣದಲ್ಲಿ ಕಳುವಾಗಿದ್ದ ಕಾರು ಮುಂಬಯಿಯಲ್ಲಿ ಪತ್ತೆ ಆರೋಪಿ ಬಂಧನ