ಹಳಿಯಾಳ:- ಟಾಟಾ ಎಸ್ ಗೂಡ್ಸ್ ರೀಕ್ಷಾವೊಂದು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನನ್ನು ಮಹಾರಾಷ್ಟ್ರದ ಭೀಡ ಪ್ರದೇಶದ ಪಾಂಡುರಂಗ ಮಾನೆ (35) ಎಂದು ಗುರುತಿಸಲಾಗಿದ್ದು. ಇತನು ಕಬ್ಬು ಕಟಾವು ಕೆಲಸಕ್ಕೆ ಹಳಿಯಾಳಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ತೆಗ್ನಳ್ಳಿ ಗ್ರಾಮ ಸಮೀಪ ಘಟನೆ ನಡೆದಿದ್ದು. ಟಾಟಾ ಎಸ್ ವಾಹನ ಬೈಕ್ಗೆ ಗುದ್ದಿ ಪರಾರಿಯಾಗಿತ್ತು.
ತಕ್ಷಣ ಪಿಎಸ್ಐ ಆನಂದಮೂರ್ತಿ ಹಾಗೂ ಎಎಸ್ಐ ಎಡಿ ಪಾವಸ್ಕರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಹಳಿಯಾಳ ಪೋಲಿಸ ಸಿಬ್ಬಂದಿಗಳು ಅಪಘಾತ ಪಡಿಸಿ ಪರಾರಿಯಾಗಿದ್ದ ವಾಹನವನ್ನು ಅಳ್ನಾವರದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
Leave a Comment