ಹಳಿಯಾಳ:- ಮೂವರು ಅಂತರ ಜಿಲ್ಲಾ ಕಳ್ಳರನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು ಪೋಲಿಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಆದೇಶದಂತೆ ಎಡಿಷನ್ ಎಸ್ಪಿ ಗೋಪಾಲ ಬ್ಯಾಕೋಡ ಹಾಗೂ ದಾಂಡೇಲಿ ಡಿವೈಎಸ್ಪಿ ಪಿ.ಮೋಹನ ಪ್ರಸಾದ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಬಿ.ಎಸ್.ಲೋಕಾಪುರ ಹಾಗೂ ಪಿ.ಎಸ್.ಐ ಆನಂದಮೂರ್ತಿ.ಸಿ. ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಲಾಗಿದೆ.
ಬಂಧಿತರನ್ನು ಅಂತರ ಜಿಲ್ಲಾಕಳ್ಳರಾದ ಧಾರವಾಡದ ಮಾಳಾಪುರದ ಸಲೀಮ್ ಮಹಮ್ಮದಸಾಬ ಹಳ್ಳಿಕೇರಿ, ಅಮೀರ್ಜಾನ್ ಗುಲಾಮ್ ಮೋಹಿದ್ದಿನ್ ಹಾಗೂ ಫಾತೀಮಾ ಮಹಮ್ಮದಸಾಬ ಹಳ್ಳಿಕೇರಿಯನ್ನು ಬಂಧಿಸಿರುವ ಹಳಿಯಾಳ ಪೋಲಿಸರು ಅವರಿಂದ ಹಳಿಯಾಳ ಪೊಲೀಸ್ ಠಾಣಾ ಗುನ್ನಾ ನಂ:205/2018 ಮತ್ತು ಗುನ್ನಾ ನಂ: 224/2018 ನೇ ಪ್ರಕರಣಗಳಲ್ಲಿ ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಳ್ಳರು ದಾಂಡೇಲಿ ನಗರಠಾಣೆ, ಹಾಸನಜಿಲ್ಲೆಯ ಅರಸಿಕೆರೆ ಶಹರಠಾಣಾ ವ್ಯಾಪ್ತಿಯಲ್ಲಿ ಘಟಿಸಿದ, ಕಳುವಿನ ಪ್ರಕರಣದಲ್ಲಿಯೂ ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ ಎಂದು ತಿಳಿಸಿರುವ ಪೊಲಿಸ್ ಅಧಿಕಾರಿಗಳು ಆರೋಪಿತರಿಂದ 2 ಟಿ.ವಿ, ಬಂಗಾರ 20 ಗ್ರಾಂ ಮೌಲ್ಯ 20,000/-, ರೇಷ್ಮೆ ಸೀರೆ-2, ಸಿಗರೇಟ ಪ್ಯಾಕೇಟಗಳು-30 ಇತ್ಯಾದಿ ಹೀಗೆ ಒಟ್ಟು ಸುಮಾರು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ಅನ್ನು ವಶಪಡಿಸಿಕೊಂಡು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಧಿಕಾರಿಗಳೊಂದಿಗೆ ಎಎಸ್ಐ ಆನಂದ ಪವಾಸ್ಕರ್, ಬಾಲಚಂದ್ರ ವಿ ಹೆಗಡೆ, ಸಿಬ್ಬಂದಿಗಳಾದ ಮಹಮದ್ ಅನೀಫ್ ಮುಲ್ಲಾ, ಶಾಹನವಾಜ ತಡಕೋಡ, ಬಸವರಾಜ ಆರ್, ಎಸ್.ಗೋವಿಂದ , ಎಮ್ ಉಪ್ಪಾರ್, ಗುರುರಾಜ ಅನ್ವರಖಾನ್, ಶ್ರೀಶೈಲ ಮಂಗಾನವರ, ರಾಚಪ್ಪಎಸ್ ಧನಗರ, ರಾಜೀವ ನಾಯ್ಕ, ಅರವಿಂದ ಭಜಂತ್ರಿ, ವಿದ್ಯಾ ನಾಯ್ಕ, ಗೀತಾ ನಾಯಕ, ಸೌಮ್ಯಾಗೌಡ ಪಾಲ್ಗೊಂಡಿದ್ದರು.
Leave a Comment