ಹಳಿಯಾಳ : ತಾಲೂಕಿನ ಗುಂಡೋಳ್ಳಿ ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯ ಚಿಕಿತ್ಸೆಗಾಗಿ ಕೆ.ಡಿ.ಸಿ.ಸಿ ಬ್ಯಾಂಕ 48ಸಾವಿರ ಪರಿಹಾರವನ್ನು ನೀಡಿದೆ. ಕಳೆದ ಮೇ 24ರಂದು ಗುಂಡೋಳ್ಳಿಯಲ್ಲಿ ಹಿಟ್ಟಿನ ಗಿರಣಿಯ ಬೆಲ್ಟಿಗೆ ಸೃಷ್ಟಿ ಸಕಪ್ಪನವರ (11) ಸಿಕ್ಕಿ ಹಾಕಿ ಕೊಂಡ ಪರಿಣಾಮ ಮುಖ ಹಾಗೂ ಮೈ ತುಂಬ ಗಂಭೀರವಾಗಿ ಗಾಯಗಳಾಗಿದ್ದವು. ಇವಳನ್ನು ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೃಷ್ಟಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಶನಿವಾರ ವಿಧಾನ ಪರಿಷತ್ ಸದಸ್ಯ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾಗಿರುವ ಎಸ್.ಎಲ್.ಘೋಟ್ನೇಕರ ಸೃಷ್ಟಿ ತಂದೆ ಜ್ಞಾನೇಶ್ವರ ಸಕಪ್ಪನವರ ಅವರಿಗೆ ಬ್ಯಾಂಕ ವತಿಯಿಂದ ಚೆಕ್ ನೀಡಿ, ಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡುವ ಭರವಸೆ ನೀಡಿದರು. ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಅನಿಲ ಚವ್ಹಾನ, ಗುಂಡೋಳ್ಳಿ ಗ್ರಾಮದ ಪ್ರಮುಖರು ಇದ್ದರು.
Leave a Comment