ಹೊನ್ನಾವರ : ಕಿಸಾನ್ ಸಂಘದಂತಹ ಸಂಘಟನೆಗಳು ಇದ್ದಾಗ ಮಾತ್ರ ಗ್ರಾಮಗಳ ಅಭಿವೃದ್ಧಿಯಾಗಲು ಸಾಧ್ಯ, ಈ ಕಿಸಾನ್ ಸಂಘ ರಾಜ್ಯದಲ್ಲೆ ಬಲಿಷ್ಟವಾದ ಸಂಘಟನೆ. ಈಗಿನ ಯುವಕರಲ್ಲಿ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗಿರುವುದು ತೀರಾ ವಿಷಾದನೀಯ ಎಂದು ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹೇಳಿದರು.
ತಾಲೂಕಿನ ಮಾಳಕೋಡ ಕ್ಷೇತ್ರಪಾಲ ದೇವಸ್ಥಾನದ ಸಭಾಭವನದಲ್ಲಿ ಭಾರತಿಯ ಕಿಸಾನ ಸಂಘದ ಕರ್ನಾಟಕ ಪ್ರದೇಶ ಹೊನ್ನಾವರ ತಾಲೂಕಿನ ಮಾಳಕೋಡ ಘಟಕ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಕೃಷಿಗೆ ಮೊದಲ ಆದ್ಯತೆ ನೀಡಬೇಕು ಕೃಷಿಯಲ್ಲಿ ನಾವು ಹಿಂದಿದ್ದೆವೆ, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಬೆಂಬಲದಿಂದ ಕೃಷಿ ಕ್ಷೇತ್ರ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ರೈತರು ಎಲ್ಲಿದಾರೋ ಅಲ್ಲಿಯೆ ಇದ್ದಾರೆ. ವಿಜಯ ಮಲ್ಯ ಅಂತವರು ಟೋಪಿ ಹಾಕಿ ಹೋಗಿದ್ದರು ಸಾಲವನ್ನು ಮನ್ನಾ ಮಾಡುವವರಿದ್ದಾರೆ, ಆದರೆ ದೇಶಕ್ಕೆ ಅನ್ನ ನೀಡುವ ರೈತರಿಂದ ಹಣ ಪಾವತಿಸಲೂ ಒಂದುದಿನ ತಡವಾದರೆ ಮನೆ ಜಪ್ತಿ ಮಾಡುತ್ತೇನೆ ಎಂದು ಬಾಗಿಲಿಗೆ ದೋಣ್ಣೆ ಹಿಡಿದು ಬರುತ್ತಾರಲ್ಲಾ ಅವರನ್ನು ತಡೆಯುವಂತಹ ರಾಜಕಾರಣಿ ಬೇಕು ಎನ್ನುವ ವಾದ ನಮ್ಮದು, ಯಾವುದೆ ಯಂತ್ರ ಇಲ್ಲದೆ ಜನ ಬದುಕುತ್ತಾರೆ ಆದರೆ ರೈತ ಇಲ್ಲದಿದ್ದರೆ ಯಾರು ಕೂಡ ಬದುಕಲೂ ಸಾದ್ಯವಿಲ್ಲಾ. ವೇದಿಕೆಯಲ್ಲಿರುವ ಶಾಸಕ ಸುನೀಲ್ ನಾಯ್ಕ ಬಜೆಟ್ ನಲ್ಲಿ ನಮ್ಮ ಕರಾವಳಿ ಭಾಗಕ್ಕೆ ಆದ ಅನ್ಯಾಯವನ್ನು ಪ್ರತಿಭಟಿಸುವ ಮೂಲಕ ಖಂಡಿಸಿದ್ದಾರೆ. ಎದ್ದುನಿಂತು ಮಾತನಾಡುವ ತಾಕತ್ ಇರತಕ್ಕಂತ ವ್ಯಕ್ತಿಗಳಲ್ಲಿ ಹೇಳಿದರೆ ಮಾತ್ರ ಸಾಧ್ಯವಾಗುತ್ತದೆ. ರೈತ ಸಂಕೂಲಕ್ಕೆ ಆಶಾದಾಯಕ ವ್ಯಕ್ತಿ ಎನಿಸಿಕೋಳ್ಳಲೂ ಸಾಧ್ಯ ಇಂತಹ ಕಾರ್ಯದೊಂದಿಗೆ ರೈತಪರ ದ್ವನಿ ಎತ್ತುವ ಕಾರ್ಯವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಳ್ಕೂರ ಗ್ರಾಮ ಪಂಚಾಯತ ಅಧ್ಯಕ್ಷ ಕೇಶವ ನಾಯ್ಕ, ಸದಸ್ಯ ಗಣಪತಿ ನಾಯ್ಕ ಬಿ ಟಿ, ಬಳ್ಕೂರ ವಿ.ಎಸ್.ಎಸ್ ಬ್ಯಾಂಕ ಅಧ್ಯಕ್ಷ ಶಂಭು ಬೈಲಾರ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕಾ ಅಧ್ಯಕ್ಷ ಪರಮೇಶ್ವರ ಭಟ್ಟ ಅಗ್ನಿ, ಉಪಾಧ್ಯಕ್ಷ ಡಿ.ಎನ್.ನಾಯ್ಕ, ಕಾರ್ಯದರ್ಶಿ ಎಮ್.ಆರ್.ಹೆಗಡೆ, ಸತ್ಯ ನಾರಾಯಣ ಹೆಗಡೆ, ಕೆ.ಆರ್.ಹೆಗಡೆ, ಆರ್.ಜಿ.ಭಟ್ಟ ಮುಂತಾದವರು ಇದ್ದರು,
Leave a Comment