ಹೊನ್ನಾವರ : ತಾಲೂಕಿನ ಕಾಸರಕೋಡ, ಮಾವಿನಕುರ್ವಾ, ಗುಂಡಬಾಳ, ಖರ್ವಾ ಹಾಗೂ ಗೇರುಸೊಪ್ಪಾ ಭಾಗದಲ್ಲಿ ದಿನದಲ್ಲಿ ಹೆಚ್ಚಿನ ಸಮಯ ವಿದ್ಯುತ್ ಪೂರೈಕೆÉ ಇಲ್ಲದಿರುವುದನ್ನು ಸಾರ್ವಜನಿಕರು ಶಾಸಕರ ಬಳಿ ತೊಡಿಕೊಂಡರು. ಈ ವಿದ್ಯುತ್ ಸಮಸ್ಯೆ ಕುರಿತು ಭಟ್ಕಳ-ಹೊನ್ನಾವರ ಶಾಸಕ ಸುನೀಲ ಬಿ.ನಾಯ್ಕ ಹೆಸ್ಕಾಂ ಹುಬ್ಬಳ್ಳಿ ವಿಭಾಗದ ಅಧಿಕಾರಿಯವರನ್ನು ಸಂಪರ್ಕಿಸಿ ಒಂದುವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿ ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕಾ ಪಂಚಾಯತದ ಶಾಸಕರ ಕಾರ್ಯಾಲಯದಲ್ಲಿ ಶಾಸಕ ಸುನೀಲ ನಾಯ್ಕ ಸೋಮವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಬಸ್ ಸಮಸ್ಯೆ ಕುರಿತು ಮನವಿ ಸಲ್ಲಿಸಿದರು. ಪಟ್ಟಣದ ಪ್ರಭಾತ ನಗರದ ಕಾಲೇಜು ಬಳಿಯಿಂದ ಬಸ್ ನಿಲ್ದಾಣದ ವರೆಗೆ ಟಿಕೆಟ್ ಮಾಡಲಾಗುತ್ತಿದೆ. ಪಾಸ್ ಅನುಮತಿ ನೀಡುತ್ತಿಲ್ಲ. ಅದ್ದರಿಂದ ಬಸ್ ನಿಲ್ದಾಣ ಹಾಗೂ ಕಾಲೇಜು ವರೆಗೆ ಹೋಗಲು ಹಾಗೂ ಬರಲು ಪಾಸ್ಗೆ ಅನುಮತಿ ನೀಡಬೇಕು ಎಂದು ಎಬಿವಿಪಿ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಕುರಿತು ಗಮನಕ್ಕೆ ತಂದರು. ಬಸ್ ನಿಲ್ದಾಣದ ಮೇಲ್ವಿಚಾರಕರು ಡಿಫೋ ದಿಂದ ಈ ಬಗ್ಗೆ ಆದೇಶವಾಗಿದೆ. ಮೇಲಾಧಿಕಾರಿಯವರನ್ನು ಸಂಪರ್ಕಿಸಿ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಶಾಸಕ ಸುನೀಲ ನಾಯ್ಕ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದ ಸಾರ್ವಜನಿಕರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 8 ಜನರು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕ ಸುನೀಲ ನಾಯ್ಕ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 25 ಅರ್ಜಿಗಳು ಬಂದಿದ್ದು ಎಲ್ಲ ಅರ್ಜಿಗಳನ್ನೂ ತಾನೇ ಖುದ್ದು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಹೆಚ್ಚಿನ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಳೆದ ಶಾಸಕರ ಅವಧಿಯಲ್ಲಿನ 64 ಫೈಲ್ಗಳು ದಾಖಲೆ ಪತ್ರಗಳಿಲ್ಲದೇ ಹಾಗೇ ಉಳಿದಿವೆ. ಕಂಪ್ಯೂಟರ್ದಲ್ಲಿ ಹೆಸರು ತೋರಿಸುತ್ತದೆ. ಆದರೆ ದಾಖಲೆಪತ್ರಗಳಿಲ್ಲ. ಈ ಅರ್ಜಿಗಳನ್ನು ಸರಿಪಡಿಸಿ ಫಲಾನುಭವಿಗಳಿಗೆ ಪ್ರಯೋಜನ ದೊರಕಿಸುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳುವುದಾಗಿ ತಿಳಿಸಿದರು.
ಉಪ್ಪೋಣಿ ಗ್ರಾ,ಪಂ. ಪಿಡಿಓ ವಾರ್ಡ್ ಸಭೆ ನಡೆಸದೇ ಗ್ರಾಮ ಸಭೆ ನಡೆಸಿರುವ ಬಗ್ಗೆ ಅಲ್ಲಿಯ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ತಕ್ಷಣ ವಾರ್ಡ್ ಸಭೆ ನಡೆಸಿ ನಂತರ ಗ್ರಾಮ ಸಭೆ ನಡೆಸುವಂತೆ ಪಿಡಿಓ ಅವರಿಗೆ ಶಾಸಕರು ತಾಕೀತು ಮಾಡಿದರು. ಕಂದಾಯ ಇಲಾಖೆ, ಪಹಣಿ ಲೋಪದೋಷ, ಸರ್ವೇ ಇಲಾಖೆ ಮತ್ತಿತರ ಇಲಾಖೆಗಳ ಸಮಸ್ಯೆಗಳ ಕುರಿತು ಸಾರ್ವಜನಿಕರು ಶಾಸಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಉಲ್ಲಾಸ ಶಾನಭಾಗ, ಕೇಶವ ನಾಯ್ಕ ಬಳಕೂರ್, ಶಂಭು ಬೈಲಾರ್, ಗಣಪತಿ ನಾಯ್ಕ ಬಿ.ಟಿ,ಮಂಜುನಾಥ ನಾಯ್ಕ, ವಿಘ್ನೇಶ ಹೆಗಡೆ ಇತರರು ಉಪಸ್ಥಿತರಿದ್ದರು.
Leave a Comment