ಹೊನ್ನಾವರ : 2018-19 ನೇ ಸಾಲಿನಲ್ಲಿ ವಿತರಿಸಿರುವ ಬಸ್ ಪಾಸ್ನಲ್ಲಿ ಗೇರುಸೊಪ್ಪಾ, ಹೀರೆಬೈಲ್, ಗುಂಡಿಬೈಲ್, ಇತರ ಕಡೆ ಹೋಗುವ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಬಸ್ಟ್ಯಾಂಡ್ಗೆ ಹೋಗಲು ಅವಕಾಶವಿಲ್ಲ. ಹೋಗುವುದಾದರೆ 7 ರೂಪಾಯಿ ಟಿಕೇಟ್ ತೆಗೆಯಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಒಂದೇ ಕಡೆ ಬಸ್ ಹತ್ತುವುದರಿಂದ ವಿದ್ಯಾರ್ಥಿನಿಯರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಪಟ್ಟಣದಲ್ಲಿ ಇರುವುದರಿಂದ ಅನಿವಾರ್ಯವಾಗಿ ಬಸ್ಟ್ಯಾಂಡ್ಗೆ ಹೋಗಬೇಕಾಗುತ್ತದೆ. ಕಾರಣ ಎಲ್ಲರಿಗೂ ಬಸ್ಟ್ಯಾಂಡ್ ವರೆಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಎ.ಬಿ.ವಿ.ಪಿ sಸಂಘಟನೆಯ ವಿದ್ಯಾರ್ಥಿUಳು ಶಾಸಕರಾದ ಸುನೀಲ ನಾಯ್ಕ ರವರಿಗೆ ಮನವಿ ಸಲ್ಲಿಸಿದ ದಿನವೆ ಶಾಸಕರು ದೂರವಾಣಿ ಮೂಲಕ ತುರ್ತು ಭೇಟಿಯಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಡಿ.ಸಿ ಸಿದ್ದೇಶ ರವರು ಸೋಮವಾರ ರಾತ್ರಿ ಶಾಸಕರನ್ನು ಖುದ್ದು ಭೇಟಿಯಾಗಿ ಸಮಸ್ಯೆ ಕುರಿತು ಚರ್ಚಿಸಿದರು.
ವಿದ್ಯಾರ್ಥಿಗಳಿಗೆ ನೀಡಿರುವ ಪಾಸ್ನಲ್ಲಿ ಕಾಲೇಜಿನವರೆಗೆ ಮಾತ್ರ ಸ್ಥಳ ನಮೂದಿಸಿರುವುದರಿಂದ ತುಂಬಾ ತೊಂದರೆಯಾಗುತ್ತಿದ್ದು ಹಿಂದಿನ ವರ್ಷ ವಿದ್ಯಾಥಿಗಳಿಗೆ ಯಾವರೀತಿ ಅನುಕೂಲ ಕಲ್ಪಿಸಿದ್ದಿರೋ ಅದೇ ಸೌಲಭ್ಯವÀನ್ನು ಮುಂದುವರಿಸುವಂತೆ ಸೂಚಿಸಿ ಒಂದು ವಾರದ ಗಡುವು ನೀಡಿದರು. ಇದಕ್ಕೆ ತಪ್ಪಿದ್ದಲ್ಲಿ ತಮ್ಮ ವಿಭಾಗೀಯ ಕಚೇರಿಯ ಮುಂದೆ ಧರಣಿ ನಡೆಸುವ ಎಚ್ಚರಿಕೆÀ ನೀಡಿದರು.
“ವಿದ್ಯಾರ್ಥಿಗಳು ನಮ್ಮ ದೇಶದ ಆಶಾಕಿರಣ. ಶಿಕ್ಷಣದಿಂದ ಯಾರು ವಂಚಿತರಾಗಬಾರದು, ಅವರಿಗೆ ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುವುದು.”
Leave a Comment