ಹಳಿಯಾಳ:- ಮಾದಕ ವಸ್ತು ನಿಯಂತ್ರಿಸಲು ಸಮಗ್ರ ಕಾನೂನು ಜಾರಿಗೆ ತಂದರು ಸಹ ಮಾದಕ ಸೇವನೆ ಸಾರ್ವಜನಿಕ ಜೀವನದಲ್ಲಿ ಗಂಭಿರ ಸವಾಲಾಗಿ ಪರಿಣಮಿಸಿದೆ. ಯುವಕರು ಹೆಚ್ಚಾಗಿ ಮಾದಕ ಸೇವನೆಗೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರು ವ್ಯಸನ ಮುಕ್ತರಾಗಬೇಕು ಆ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದಲೇ ಜನ ಜಾಗೃತಿ ಮೂಡಿಸುವ ಕಾರ್ಯ ಸಂಘ-ಸಂಸ್ಥೆ ಸಾರ್ವಜನೀಕರಿಂದ, ಸಂಬಂಧಿಸಿದ ಇಲಾಖೆಗಳಿಂದ ಆಗಬೇಕಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಠ್ಠಲ ಎಸ್ ಧಾರವಾಡಕರ ಹೇಳಿದರು. ಬುಧವಾರದಂದು ಹಳಿಯಾಳದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಮದ್ಯಸ್ತಿಕೆ ಸಂದಾನದ ಕುರಿತು ಕಾನೂನು ನೆರವು-ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾದಕ ವಸ್ತು ಸೇವನೆಯಿಂದ ಮಾನವನ ಆರೊಗ್ಯ ಹದಗೆಡುವುದಲ್ಲದೇ ಸಮಾಜದಲ್ಲಿ ವ್ಯಾಜ್ಯಗಳು ಹೆಚ್ಚಾಗುತ್ತಿವೆ. ಮಾದಕ ವಸ್ತುಗಳ ನಿಷೇಧ ಜಾಗೃತಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಸಂಘಟಿಸಬೇಕೆಂದರು. ಹಿರಿಯ ನ್ಯಾಯಾಧೀಶ ಟಿ. ಗೊವಿಂದಯ್ಯಾ ಮಾತನಾಡಿ ಕಾನೂನಿನ ಅರಿವು ಪ್ರತಿಯೊಬ್ಬರ ಜವಾಬ್ದಾರಿ ಇಂದು ಮನುಷ್ಯನ ಆಸೆಗೆ ಮಿತಿಯಿಲ್ಲ ಆಸೆಗಳು ಹೆಚ್ಚಾದಂತೆ ಸಾಮರಸ್ಯಗಳು ಹೆಚ್ಚಾಗುತ್ತಿವೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಕಕ್ಷಿದಾರರು ತಮ್ಮ ವ್ಯಾಜ್ಯಗಳಿಗೆ ತಾವೇ ಸ್ವ-ಇಚ್ಛೆಯಿಂದ ತಿರ್ಮಾನಿಸಿ ರಾಜೇ ಸಂದಾನದಿಂದ ಬಗೆಹರಿಸಿಕೊಂಡು ಸಹಬಾಳ್ವೆಯಿಂದ ಜೀವನ ಸಾಗಿಸಿರಿ ಎಂದರು. ನ್ಯಾಯ್ಯಾಧೀಶೆ ಶಿಲ್ಪಾ ಎಚ್.ಎ ಮಾತನಾಡಿ ಕಕ್ಷಿದಾರರು ಪರಸ್ಪರ ಮಾನವೀಯತೆಯಿಂದ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಿ ಎಂದು ಕಾನೂನು ಸೇವಾ ಪ್ರಾಧಿಕಾರದ ಕುರಿತು ತಿಳಿಸಿದರು. ನ್ಯಾಯ್ಯಾಧೀಶ ಬಸವರಾಜ ಸನದಿ ಮಾತನಾಡಿ ಪ್ರತಿಯೊಬ್ಬರು ಉತ್ತಮ ಆರೋಗ್ಯದಿಂದರಲು ವ್ಯಸನದಿಂದ ದೂರ ಇರಬೇಕು ಯುವಕರು ದುಷ್ಚಟಗಳಿಗೆ ಬಲಿಯಾಗದೇ ದೈನಂದಿನ ಕಾನೂನು ಅರಿತುಕೊಂಡು ಉತ್ತಮ ಜೀವನ ಸಾಗಿಸುವಂತೆ ಕರೆ ನೀಡಿದರು. ತಾಲೂಕಾ ವೈದ್ಯಾಧಿಕಾರಿ ಡಾ. ರಮೇಶ ಕದಂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ವಕೀಲ ಪ್ರಕಾಶ ಅಂಗಡಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಕೀಲ ಸಂಘದ ಅದ್ಯಕ್ಷ ಎ.ಎಮ್ ಪಾಟೀಲ್ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಅಜೀತ ಜನಗೌಡಾ, . ನ್ಯಾಯವಾದಿ ಬಿ.ಎನ್ ಪಟ್ಟೇಕರ, ಹಳಿಯಾಳ-ದಾಂಡೇಲಿ ವಕೀಲರ ಸಂಘದ ಸರ್ವ ಸದಸ್ಯರು, ಕಕ್ಷಿದಾರರು ಇದ್ದರು. ನ್ಯಾಯವಾದಿ ಎಲ್ ಎಸ್ ಅರಶೀನಗೇರಿ ಸ್ವಾಗತಿಸಿದರು, ಸಂತೋಷ ಹಬ್ಬು ನಿರೂಪಿಸಿದರು. ಸುರೇಖಾ ಗುಣಗಾ ವಂದಿಸಿದರು.
Leave a Comment