ಹೊನ್ನಾವರ: “ಹಿರೆಬೈಲ್ ಪ್ರದೇಶವು ಅತ್ತ ಶಿರಸಿಗು ಅಲ್ಲ ಇತ್ತ ಭಟ್ಕಳಕ್ಕು ಅಲ್ಲದ ರೀತಿಯಲ್ಲಿ ಕಡೆಗಣನೆಯಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.ತನ್ನ ಅವಧಿಯಲ್ಲಿ ಆಗಬೇಕಾದ ಕಾಮಗಾರಿಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸುವೆ” ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಭರವಸೆ ವ್ಯಕ್ತಪಡಿಸಿದರು.
ಹೊನ್ನಾವರ: ತಾಲೂಕಿನ ಹಿರೆಬೈಲ್-ಹೊಸ್ಗೋಡು ಗ್ರಾಮಸ್ಥರಿಂದ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರಿಗೆ À ಅಭಿನಂದನಾ ಕಾರ್ಯಕ್ರಮ ಎರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಶಾಸಕ ಸುನಿಲ್ “ನಿಸ್ವಾರ್ಥದಿಂದ ತನ್ನ ಮೇಲೆ ವಿಶ್ವಾಸವಿಟ್ಟು ಅತಿ ಹೆಚ್ಚು ಮತನೀಡಿ ಗೆಲುವಿಗೆ ಶ್ರಮಿಸಿದ್ದಿರಿ ನಿಮಗೆ ನಾನು ಚಿರಋಣಿ ಮುಂದಿನ ದಿನದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿ ಕಾಮಗಾರಿಗಳನ್ನು ನಡೆಸುವೆ ಎಂದರು. ಶಾಸಕರಾದ ಮೇಲೆ ಕೆಲವರಿಗೆ ಮನಸ್ಸು ಕಲ್ಲಾಗುತ್ತದೆ, ಬುದ್ದಿ ಅಜಿರ್ಣವಾಗುತ್ತದೆ ಆದರೆ ನಾನು ಅದಕ್ಕೆ ಆಸ್ಪದ ಕೊಡುವುದಿಲ್ಲ. ಮಾಜಿ ಶಾಸಕ ಮಂಕಾಳ ವೈದ್ಯ ಅವಧಿಯಲ್ಲಿ ಚಾಲನೆ ಸಿಕ್ಕ ಕಾಮಗಾರಿಗಳು ಅಂದಾಜು 80% ರಷ್ಟು ಬಾಕಿ ಇದೆ, ಅವೆಲ್ಲವನ್ನು ಪೂರ್ಣಗೊಳಿಸುವುದು ನನ್ನ ಮುಂದಿನ ಪ್ರಯತ್ನವಾಗಿದೆ. ತನ್ನ ಅವಧಿಯಲ್ಲಾಗುವ ಯಾವುದೇ ಕಾಮಗಾರಿಗಳಲ್ಲಿ ಕಮಿಷನ್ಗೆ ಆಶೆ ಪಡದೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ನಂತರ ಊರ ನಾಗರಿಕರ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಊರಿನಲ್ಲಿ ಆಗಬೆಕಾದ ಮೂಲಭೂತ ಸೌಕರ್ಯಗಳ ಬೇಡಿಕೆ ಮುಂದಿಟ್ಟು ಊರಿನ ಜನತೆ ಶಾಸಕರಿಗೆ ಮನವಿ ಸಲ್ಲಿಸಿದರು.
ಚಿಕ್ಕನಕೊಡ್ ಗ್ರಾಮ ಪಂಚಾಯತ್ ಸದಸ್ಯೆ ಎಸ್.ನಾಯ್ಕ ಮಾತನಾಡಿ ನಾವು ನಿಮ್ಮನ್ನು ಆರಿಸಿ ತರುವ ಕನಸ್ಸನ್ನು ಕಂಡು ಅದು ನನಸು ಮಾಡಿಕೊಂಡಿದ್ದೇವೆ ಅದೇ ರೀತಿ ಮುಂದಿನ ದಿನಗಳಲ್ಲಿ ನಮ್ಮ ಊರಿನ ಜನತೆಯ ಕನಸು ಇಡೇರಿಸಿ ಎಂದರು.
ಹಿರೆಬೈಲ್-ಆರ್ಮುಡಿ ಸಂಪರ್ಕ ಸೇತುವೆ, ರಸ್ತೆ, ವಿದ್ಯುತ್ ಮೂಲಸೌಕರ್ಯಗಳ ಜೊತೆಗೆ ಊರಿನಲ್ಲಿ ಮೋಬೈಲ್ ಟವರ್ ನಿರ್ಮಾಣವಾಗಬೇಕಿದೆ ಎಂದು ವಿನಂತಿಸಿಕೊಂಡರು.
ಇನ್ನೊರ್ವ ಸದಸ್ಯ ಸುರೇಶ ಗೌಡ ಮಾತನಾಡಿ ನಮ್ಮ ಊರಿನ ಶಾಲೆಯಲ್ಲಿ 29 ವಿದ್ಯಾರ್ಥಿಗಳಿದ್ದು ಕೇವಲ ಒಂದು ಸರ್ಕಾರಿ ಹಾಗೂ ಅತಿಥಿ ಶಿಕ್ಷಕರಿದ್ದಾರೆ ವಿದ್ಯಾರ್ಥಿಗಳ ವಿದ್ಯಾಬ್ಯಾಸದ ಅನೂಕೂಲಕ್ಕಾಗಿ ಇನ್ನೊರ್ವ ಸರ್ಕಾರಿ ಶಿಕ್ಷಕರನ್ನು ನೇಮಿಸಿ ಎಂದು ವಿನಂತಿಸಿಕೊಂಡರು.
ವೇದಿಕೆಯಲ್ಲಿ ತಾ.ಪಂ ಸದಸ್ಯ ಆರ್.ಪಿ ನಾಯ್ಕ, ಹಡಿನಬಾಳ ಗ್ರಾ.ಪಂ ಅಧ್ಯಕ್ಷ ಚಂದ್ರಹಾಸ ನಾಯ್ಕ, ಬಿಜೆಪಿ ಭೂತ್ ಕಮಿಟಿ ಸದಸ್ಯ ಗೋಪಾಲ ನಾಯ್ಕ, ಕೆಶವ ನಾಯ್ಕ ಬಳ್ಕೂರು, ನಾಗೇಶ ಗೌಡ, ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
Leave a Comment